ಎಲ್ಐಸಿ ಸಂಸ್ಥೆ ವಿಶ್ವಾಸ ಸಂಸ್ಥೆಯಾಗಿದೆ : ಶಿವಪ್ರಕಾಶ

ಚಿಕ್ಕೋಡಿ : ಎಲ್‍ಐಸಿ ಬಗ್ಗೆ ಜನರುಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಎಲ್‍ಐಸಿ ಸಂಸ್ಥೆ ಮೇಲೆ ವಿಶ್ವಾಸಇಟ್ಟು ಪಾಲಿಸಿಗಳನ್ನು ಮಾಡಬೇಕೆಂದುರಾಯಬಾಗ ಎಲ್‍ಐಸಿ ಶಾಖಾಧಿಕಾರಿ ಶಿವಪ್ರಕಾಶ ಹೇಳಿದರು.
ಬಾವನಸೌಂದತ್ತಿ ಗ್ರಾಮನ್ನು ವಿಮಾಗ್ರಾಮವನ್ನುಎರಡನೇ ಬಾರಿ ವಿಮಾಗ್ರಾಮವನ್ನಾಗಿ ಘೋಷಿಸಿ ಮಾಡಿಒಂದು ಲಕ್ಷರೂ.ಚೆಕ್‍ನ್ನುಗ್ರಾ.ಪಂ.ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಎಲ್‍ಐಸಿ ದೇಶದಅತೀದೊಡ್ಡಜೀವವಿಮಾ ನಿಗಮವಾಗಿದ್ದು, ಅದುತನಗೆ ಬರುವ ಲಾಭಾಂಶದಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಣ ನೀಡುತ್ತಿದೆ.
ಜನರುಇನ್ನು ಹೆಚ್ಚಿನ ಹಣವನ್ನು ಎಲ್‍ಐಸಿ ವಿಮೆ ಮಾಡುವುದರ ಮೂಲಕ ಅಭಿವೃದ್ಧಿಯಲ್ಲಿಕೈಜೋಡಿಸಬೇಕೆಂದುಕರೆ ನೀಡಿದರು.
ಗ್ರಾಮಕ್ಕೆ ನೀಡಿದ ಒಂದು ಲಕ್ಷರೂ. ಸಹಾಯಧನದಲ್ಲಿಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದುಗ್ರಾ.ಪಂ.ಯವರಿಗೆ ಸೂಚಿಸಿದರು.
ಎಲ್‍ಐಸಿ ಅಭಿವೃದ್ಧಿಅಧಿಕಾರಿಜಯಂತ ಬಗಲಿ, ಏಜೆಂಟ ಸಂಜಯಕುಂಬಾರ, ಶೀತಲ ಮಹಾಜನ, ಶ್ಯಾಮ್‍ಅಸೋದೆ.ಗ್ರಾ.ಪಂ.ಅಜೀತಖೆಮಲಾಪೂರೆ, ಅನೀಲ ಹಂಜೆ, ಶ್ರೀಕಾಂತ ಮಂಗಸೂಳೆ, ಕುಂತಿನಾಥ ಮಗದುಮ್ಮ, ದಶರಥ ಭುವಿ ಸೇರಿದಂತೆಅನೇಕರು ಉಪಸ್ಥಿತರಿದ್ದರು.

ವರದಿ : ಯಲ್ಲಪ್ಪ ಮಬನೂರ ಚಿಕ್ಕೋಡಿ
Share
WhatsApp
Follow by Email