ಅಥಣಿ: ಕರ್ತವ್ಯ ನಿರತ ಸಿಬ್ಬಂದಿಗೆ ಉಚಿತ ಆಹಾರ ವಿತರಣೆ

ಅಥಣಿ : ಪೋಲಿಸ್ ಠಾಣೆಯ ಸಿಬ್ಬಂದಿ,ಆರೋಗ್ಯ ಇಲಾಖೆ ಮತ್ತು ಪುರಸಭೆ ಸಿಬ್ಬಂದಿಗೆ ಅಥಣಿ ಪಟ್ಟಣದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಎರಡುನೂರಕ್ಕು ಹೆಚ್ಚು ಜನರಿಗೆ ಅಲ್ಪೋಪಹಾರ ಮತ್ತು ಮದ್ಯಾಹ್ನ ಮತ್ತು ಸಂಜೆಯ ಊಟದ ವ್ಯವಸ್ಥೆ ಮಾಡಿದ್ದು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ತೆರಳಿ ಆಹಾರ ವಿತರಣೆ ಮಾಡುತ್ತಿರುವದು ಕಂಡುಬAತು.
ಸಮಾಜಸೇವಕ ವಿಜಯಕುಮಾರ ನೆಮಗೌಡ ನಮ್ಮ ಕೈಲಾದಷ್ಟು ನಮ್ಮ ಸೇವೆ ಮಾಡುತ್ತಿದ್ದೇವೆ ನಮಗಾಗಿ ದುಡಿಯುವ ನಮ್ಮ ಒಳಿತಿಗಾಗಿ ಶ್ರಮಿಸುವ ವೈದ್ಯಕೀಯ ಸಿಬ್ಬಂದಿ ಪುರಸಭೆ ಹಾಗೂ ಪೋಲಿಸ್ ಸಿಬ್ಬಂದಿಯ ಋಣ ದೊಡ್ಡದು.ಹಾಗೆಯೆ ಅಥಣಿ ಪಟ್ಟಣದಲ್ಲಿ ಇರುವ ತಾಲ್ಲೂಕು ಆಸ್ಪತ್ರೆಗೆ ಹಳ್ಳಿಗಳಿಂದ ಆಗಮಿಸುವ ರೋಗಿಗಳು ಲಾಕ್ ಡೌನನಿಂದ ಆಹಾರ ಸಿಗದೆ ಪರದಾಡುವ ಸ್ಥಿತಿ ಇದ್ದು ಈ ನಿಟ್ಟಿನಲ್ಲಿ ಆಹಾರ ವಿತರಣೆ ಮಾಡಿ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ಈ ವೆಳೆ ಅಥಣಿ ಪಟ್ಟಣದ ಸಮಾಜಸೇವಕರಾದ
ರಾಮನಗೌಡ ಪಾಟೀಲ, ವಿಜಯಕುಮಾರ ನೇಮಗೌಡ,ಸಿದ್ದು ನೇಮಗೌಡರ,ಅಣ್ಣಪ್ಪ ಕಟಾಂವಿ,ವಸೀಮ ಮುಕ್ಕೇರಿ,ಈರನಗೌಡ ಪಾಟೀಲ,ಮಂಜುನಾಥ ಈರಗೌಡ,ಭರತೇಶ ಕಾಸರ,ಸಂಗ್ರಾಮ ವೇಳಾಪೂರೆ
Share
WhatsApp
Follow by Email