ಕರ್ಪ್ಯು ಉಲ್ಲಂಘಿಸಿ ರಸ್ತೆಗಿಳಿದ್ದರೆ ಬೈಕ್ ಜಪ್ತಿ. ಅಥಣಿ ಡಿವೈ ಎಸ್ಪಿ. ಎಸ್ ವಿ ಗಿರೀಶ

ಅಥಣಿ: ಕೊರೊನಾ ಜಾಗತಿಕ ವ್ಯಾಧಿ ಹೋಗಲಾಡಿಸಲು ಸದ್ಯ ಲಾಕ್ ಡೌನ್ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೆ ಎಸ್ ಆರ್ ಪಿ ತುಕುಡಿ ತರಿಸಿ ಪೋಲಿಸ್ ಬಂದೋಬಸ್ತ ಹೆಚ್ಚಿಸಲಾಗಿದೆ.
ಅಥಣಿ ಹಾಗೂ ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳು ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊoಡಿದ್ದು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಕೆಲಸ ಅರಸಿ ದುಡಿಯಲು ಹೋದ ಜನರು ಸದ್ಯ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದು ವಾಹನ ಸೌಕರ್ಯ ಇಲ್ಲದೆ ಪರದಾಡುತ್ತಿದ್ದರೆ ಇನ್ನೊಂದು ಕಡೆ ಅನವಶ್ಯಕವಾಗಿ ಬೈಕ್ ಸವಾರಿ ಮಾಡುತ್ತಿದ್ದವರನ್ನು ಇಷ್ಟು ದಿನ ಬೆತ್ತದ ರುಚಿ ತೋರಿಸುವ ಅನಿವಾರ್ಯತೆ ಎದುರಾಗಿದ್ದ ಪೋಲಿಸ್ ಸಿಬ್ಬಂದಿ ನಿನ್ನೆ ಮತ್ತೊಂದು ಕಾರ್ಯತಂತ್ರ ರೂಪಿಸಿದ್ದು ಐವುತ್ತಕ್ಕು ಹೆಚ್ಚು ಬೈಕಗಳನ್ನು ಸೀಜ್ ಮಾಡಿದ್ದು ಪುಂಡ ಪೋಕರಿಗಳ ಅಲೆದಾಟ ಕಡಿಮೆ ಆಗಿದ್ದು ಕಂಡುಬoತು.
ಅದೆಷ್ಟು ಸಮಜಾಯಿಸಿ ಹೇಳಿದರು ಜನ ಕೇಳದೆ ರಸ್ತೆಗೆ ಇಳಿದ ಹಿನ್ನೆಲೆಯಲ್ಲಿ ಲಾಠಿ ಬೀಸಿದ ಪೋಲಿಸ್ ಸಿಬ್ಬಂದಿ ವಿರುದ್ದ ಜನರ ಮೆಚ್ಚುಗೆ ಕೂಡ ವ್ಯಕ್ತವಾಗಿದ್ದು ಪೋಲಿಸರು ನಮ್ಮ ಒಳಿತಿಗಾಗಿ ಶ್ರಮಿಸುತ್ತಿದ್ದು ಅವರ ಕ್ರಮ ಸರಿ ಇದೆ. ಸದ್ಯದ ಮಟ್ಟಿಗೆ ತೊಂದರೆ ಆದರೂ ಕೂಡ ಸಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದ್ದು ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಮತ್ತು ಸರ್ಕಾರದ ಹಾಗೂ ಅಧಿಕಾರಿಗಳ ಮನವಿಗೆ ಜನರು ಸ್ಪಂದಿಸಿ ಮನೆಯಲ್ಲಿ ಇರಬೇಕು ಎಂದು ಸಮಾಜಸೇವಕ ರಾಮನಗೌಡ ಪಾಟೀಲ ಹೇಳಿದರು.
Share
WhatsApp
Follow by Email