BIG BREAKING : ಕರ್ನಾಟಕದ ಮಾಧ್ಯಮ ಲೋಕಕ್ಕೂ ವ್ಯಾಪಿಸಿದ ಕೊರೋನಾ : ಬೆಂಗಳೂರಿನ 35ಕ್ಕೂ ಹೆಚ್ಚು ಪತ್ರಕರ್ತರಿಗೆ ಕ್ವಾರಂಟೈನ್

ಬೆಂಗಳೂರು : ಮಹಾರಾಷ್ಟ್ರದ 30 ಪತ್ರಕರ್ತರಿಗೂ ಕೊರೋನಾ ಸೋಂಕಿನ ನಂತ್ರ, ರಾಜ್ಯದ ಪತ್ರಕರ್ತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂತವರಲ್ಲಿ ಓರ್ವ ಪತ್ರಕರ್ತನಿಗೂ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದಂತ 35ಕ್ಕೆ ಹೆಚ್ಚು ಪತ್ರಕರ್ತರನ್ನು ಇದೀಗ ಹೋಂ ಕ್ವಾರಂಟೈನ್ ಮಾಡಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ದೃಢಪಟ್ಟಂತ ಬೆಳಗಿನ 15 ಹೊಸ ಕೊರೋನಾ ಸೋಂಕಿತ ಪ್ರಕರಣದಲ್ಲಿ ರಾಜ್ಯದ ಓರ್ವ ಪತ್ರಕರ್ತನಿಗೂ ಕೂಡ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂಬುದಾಗಿ ತಿಳಿಸಿದ್ದರು. ಅಲ್ಲದೇ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದಂತ ಹೆಲ್ತ್ ಬುಲೆಟಿನ್ ನಲ್ಲೂ ಸ್ಪಷ್ಟವಾಗಿತ್ತು.
ಈ ಹಿನ್ನಲೆಯಲ್ಲಿ ಸೋಂಕಿತ ಪತ್ರಕರ್ತನ ಸಂಪರ್ಕದಲ್ಲಿದ್ದಂತ ರಾಜ್ಯದ ಸುದ್ದಿ ಮಾಧ್ಯಮದ ಪತ್ರಕರ್ತರು ಆತಂಕಕ್ಕೆ ಒಳಗಾಗಿದ್ದಾರೆ.
Share
WhatsApp
Follow by Email