ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಾಕ್ ಡೌನ ಮುಗಿಯುವವರೆಗೆ ಊಟದ ವ್ಯವಸ್ಥೆ

ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಾಕ್ ಡೌನ ಮುಗಿಯುವವರೆಗೆ ಊಟದ ವ್ಯವಸ್ಥೆ


ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ತಗೆದುಕೊಂಡ ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ, ಪೋಲೀಸರು, ಕಂದಾಯ, ಪೌರಕಾರ್ಮಿಕ ಇಲಾಖೆ ಗಳೊಂದಿಗೆ ಕರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳು, ಪತ್ರಕರ್ತರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಅರಭಾಂವಿ ಕ್ಷೇತ್ರದ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಡೀ ದೇಶವೇ ಲಾಕ್ ಡೌನ್ ಇರುವಾಗ ಅಧಿಕಾರಿ ವರ್ಗದವರು ಜನ ಸಾಮಾನ್ಯರ ಕೆಲಸಗಳನ್ನು ನಿರ್ವಹಿಸುವಲ್ಲಿ ಕಾರ್ಯ ನಿರತರಾಗಿದ್ದಾರೆ ಇಂತಹ ಸಮಯದಲ್ಲಿ ಕೆ ಎಮ್ ಎಪ್ ರಾಜ್ಯಧ್ಯಕ್ಷರು ಹಾಗೂಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕೊರೋನಾ ಹಿನ್ನೆಲೆ ಕೆಲಸ ಮಾಡುತ್ತಿರುವವರಿಗೆ ಲಾಕ್ ಡೌನಗ ಮುಗಿಯುವ ವರೆಗೂ ನಿರಂತರ ಊಟೋಪಚರಣೆಯ ವ್ಯವಸ್ಥೆ ಮಾಡಿದ್ದಾರೆ.
ಊಟೋಪಚರಣೆಯ ಸಮಯದಲ್ಲಿ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿ ಟಿಮ್ ಎನ ಎಸ್ ಎಪ್ ನ ದಾಸಪ್ಪಾ ನಾಯಕ್, ಚನ್ನಮಲಿಕಾರ್ಜುನ ಎಕ್ಸಂಬಿ, ಮರೇಪ್ಪ ಮರೆಪ್ಪಗೋಳ, ತಾಲೂಕಾ ದಂಡಾಧಿಕಾರಿ ಡಿ ಜೆ ಮಹಾತ, ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್ ಮುಖ್ಯ ಅಧಿಕಾರಿ ದೀಪಕ್ ಹರ್ದಿ, ಹಿರಿಯ ಆರೋಗ್ಯ ನೀರಿಕ್ಷಕ ಚೀದಾನಂದ ಮುಗಳಕೋಡ, ಕಿರಿಯ ಆರೋಗ್ಯ ನೀರಿಕ್ಷಕ ಪ್ರೀತಮ್ ಬೋವಿ ಇವರ ನೇತ್ರತ್ವದಲ್ಲಿ ಎಲ್ಲ ಅಧಿಕಾರಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ, ಸಿಬಂದಿಗಳಿಗೆ ಊಟ ನಿಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರು ಉಸ್ಥಿತರಿದ್ದರು.
Share
WhatsApp
Follow by Email