ಆಹಾರ ಕಿಟ್ ವಿತರಿಸುವುತ್ತಿರುವ ಪತ್ರಕರ್ತ ಹಣಮಂತ ಕಂಕಣವಾಡಿಯವರ ಕಾರ್ಯ ಶ್ಲಾಘನೀಯ : ಪಿಎಸ್‌ಐ ಬಾಲದಂಡಿ

ಆಹಾರ ಕಿಟ್ ವಿತರಿಸುವುತ್ತಿರುವ ಪತ್ರಕರ್ತ ಹಣಮಂತ ಕಂಕಣವಾಡಿಯವರ ಕಾರ್ಯ ಶ್ಲಾಘನೀಯ : ಪಿಎಸ್‌ಐ ಬಾಲದಂಡಿ

  • ಮೂಡಲಗಿ ತಾಲೂಕಿನ ಹಳ್ಳೂರ, ಖಾನಟ್ಟಿ, ಗುರ್ಲಾಪೂರ, ತುಕ್ಕಾನಟ್ಟಿ ಗ್ರಾಮಗಳ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ಮೂಡಲಗಿ : ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರು, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಧಾವಿಸಿ ಆಹಾರ ಕಿಟ್ ವಿತರಿಸುತ್ತಿರುವ ಪತ್ರಕರ್ತರ ಹಣಮಂತ ಕಂಕಣವಾಡಿ ಅವರು ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯ ಪಿಎಸ್‌ಐ ಎಚ್ ವೈ ಬಾಲದಂಡಿ ಹೇಳಿದರು.

ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವತ್ತು ಕ್ರಿಯಾಶೀಲರಾಗಿ, ಸದಾ ಚಟುವಟಿಕೆಯಲ್ಲಿರುವವರು. ಯಾವುದೇ ದುರ್ಘಟನೆ, ಸಮಾಜ ಘಾತುಕ ಘಟನೆ, ಸಾಂಕ್ರಾಮಿಕ ರೋಗಗಳು ಬಂದಾಗ ಪತ್ರಕರ್ತರೇ ನಿರಂತರ ಸುದ್ದಿಯ ಬೆನ್ನುಬೀಳುವವರು. ಅದೇ ರೀತಿಯಲ್ಲಿ ಹಣಮಂತ ಕಂಕಣವಾಡಿಯವರು ತಾಲೂಕಿನ ಗುರ್ಲಾಪೂರ, ಹಳ್ಳೂರ, ಖಾನಟ್ಟಿ, ತುಕ್ಕಾನಟ್ಟಿ ಹಾಗೂ ಮೂಡಲಗಿ ಪಟ್ಟಣದ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ನೀಡಿ, ಅವರಿಗೆ ಧೈರ್ಯ ತುಂಬುವoತ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮೂಡಲಗಿ ಪಟ್ಟಣದ ಯಲ್ಲಮ್ಮ ದೇವಸ್ಥಾನದ ಹತ್ತಿರ ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ

ರಾಜ್ಯ ಪ್ರಶಸ್ತಿ ವಿಜೇತ ಸಿದ್ದಣ್ಣ ದುರುದುಂಡಿ ಮಾತನಾಡಿ, ಕೊರೊನಾ ಮಾಹಾಮಾರಿ ಈಗ ಎಲ್ಲೆಡೆ ವ್ಯಾಪಿಸುತ್ತಿದ್ದು ಆ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಆದರಲ್ಲೂ ಪತ್ರಕರ್ತರು ಸಮಾಜ ಸೇವೆ ಹಾಗೂ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ನೆರವಾಗುವುದು ಉತ್ತಮ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಕೆಎಮ್‌ಎಫ್ ಮಾಜಿ ನಿರ್ದೇಶಕ ಶಂಕರ ಬೋಳನ್ನವರ, ಮೂಡಲಗಿ ಪುರಸಭೆ ಸದಸ್ಯ ಆನಂದ ಟಪಾಲದಾರ್, ಮಾಜಿ ಪುರಸಭೆ ಸದಸ್ಯ ರಾಮಪ್ಪ ನೇಮಗೌಡರ್, ಬಾಬು ಗದಾಡಿ, ನಾಗಪ್ಪ ಮರ್ದಿ, ಬಸಲಿಂಗಪ್ಪ ನಿಂಗನೂರು, ಬಸವರಾಜ ರೋಡನ್ನವರ, ಎಸ್.ಜಿ. ಹಂಚನಾಳ, ಮಹಾದೇವ ರಂಗಾಪೂರ, ಎಸ್.ಎಮ್ ಇಟನ್ಯಾಳ ಹಾಗೂ ಅನೇಕರು ಉಪಸ್ಥಿತರಿದ್ದರು.

Share
WhatsApp
Follow by Email