ವಿದ್ಯುತ್ ಅವಘಡ : ತಪ್ಪಿದ ಭಾರೀ ಅನಾಹುತ

ವಿದ್ಯುತ್ ಅವಘಡ : ತಪ್ಪಿದ ಭಾರೀ ಅನಾಹುತ

ನಿವೃತ್ತ ಪಿಎಸ್ಐ ಮನೆಯಲ್ಲಿ ನಡೆದ ಘಟನೆ

ಫ್ರಿಜ್ ಬೆಂಕಿಗೆ ಆಹುತಿ

ಮೂಡಲಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಫ್ರಿಜ್ ಹೊತ್ತಿ ಉರಿದ ಘಟನೆ ಪಟ್ಟಣದ ಲಕ್ಷ್ಮಿ ನಗರದಲ್ಲಿ ನಡೆದಿದೆ.

ಲಕ್ಷ್ಮಿ ನಗರ ನಿವಾಸಿ ಶಿವಶಂಕರ ಶಾಬನ್ನವರ ಎಂಬವರ ಮಾಲಕತ್ವದಲ್ಲಿರುವ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಎಸ್ಐ ಬಸವರಾಜ್ ಉಪ್ಪಾರ ಅವರು ಲಾಕ್ ಡೌನ್ ಇರುವ ಹಿನ್ನೆಲೆ ತೋಟದ ಮನೆಯಲ್ಲಿ ವಾಸವಾಗಿದ್ದು, ಸೋಮವಾರದಂದು ಸಂಜೆ ಸುಮಾರು 4:30 ಗಂಟೆಗೆ ಶಾರ್ಟ್ ಸರ್ಕ್ಯೂಟ್​ನಿಂದ ಫ್ರಿಜ್ ಬೆಂಕಿಗೆ ಆಹುತಿಯಾಗಿದೆ.ಅಷ್ಟೇ ಅಲ್ಲದೇ ಮನೆಯ ಎಲ್ಲ ಕಿಡಿಕಿಗಳು ಬಂದ್ ಇರುವುದರಿಂದ ಅಡುಗೆ ಮನೆಯ ವಸ್ತುಗಳು ಹಾಗೂ ಇಡೀ ಮನೆಯೂ ಹೊಗೆಯಲ್ಲಿ ಮುಳುಗಿವೆ. ಅದೃಷ್ಟವಶ ಪಕ್ಕದಲ್ಲಿರುವ ಸಿಲಿಂಡರ್ ಗ್ಯಾಸ್ ಸ್ಪೋಟಗೊಂಡಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಗಿಲು ತಗೆದು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

Share
WhatsApp
Follow by Email