
ಕಲಬುರ್ಗಿಯಲ್ಲಿ ಕೊರೊನಾದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ನಗರದ ವಾರ್ತಾ ಭವನದಲ್ಲಿ ಜಿಲ್ಲಾಧಿಕಾರಿ ಶರತ್ ಬಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸುದ್ದಿಗೋಷ್ಠಿ ನಡೆಸಲಾಗಿದೆ.
ಈ ವೇಳೆ ಚರ್ಚೆ ಮಾಡಿ, ಪರೀಕ್ಷೆ ಮುಂದುಡಿಕೆ ಬಗ್ಗೆ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಂತೆ. ರಾಜ್ಯದಲ್ಲಿ ಮಾರ್ಚ್ 27 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲು ದಿನಾಂಕ ನಿಗದಿಯಾಗಿದೆ.
ಕಲಬುರ್ಗಿಯಲ್ಲಿ ಕೊರೊನಾದಿಂದ ವೃದ್ಧ ಮೃತಪಟ್ಟಿದ್ದಾರೆ. ಕೊರೊನಾದಿಂದ ಮರಣ ಹೊಂದಿದ, ಭಾರತದ ಮೊದಲ ಪ್ರಕರಣ ಇದಾಗಿದೆ. ಹೀಗಾಗಿ, ಇಡೀ ಕಲಬುರ್ಗಿಯ ಮೇಲೆ ಹೆಚ್ಚು ನಿಗಾ ವಹಿಸಿಲಾಗಿದೆ. ಮನೆ ಬಿಟ್ಟು ಹೊರಬರದಿರುವ ಜನರಿಗೆ ಸೂಚನೆ ನೀಡಲಾಗಿದೆ.