
ಸದ್ಯ ಪೇಯಿಂಗ್ ಗೆಸ್ಟ್ ಅಥವಾ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಬಿಬಿಎಂಪಿ ಮನವಿ ಮಾಡಿದೆ. ರಾಜ್ಯ ಸರ್ಕಾರದ ಆದೇಶದಂತೆ ನಿಮ್ಮ ಶಿಕ್ಷಣ ಸಂಸ್ಥೆ ರಜೆ ಘೋಷಿಸಿದ್ದರೆ, ಕೂಡಲೇ ನಿಮ್ಮ ಮನೆ ಅಥವಾ ಊರಿಗೆ ತೆರಳಿ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ. ಹಾಗೇ ಪಿಜಿಗಳಲ್ಲಿ ಕಟ್ಟುನಿಟ್ಟಾಗಿ ಸ್ವಚ್ಛತೆ ಕಾಪಾಡಬೇಕು ಎಂದು ಮಾಲೀಕರಿಗೆ ಆದೇಶಿಸಿದ್ದಾರೆ.