ಮುದ್ದೇಬಿಹಾಳ: ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಜೀವನೋಪಾಯಕ್ಕೆ ಕಷ್ಟ ಪಡುತ್ತಿರುವ ಬಡಕುಟುಂಬಗಳಿಗೆ ಮುದ್ದೇಬಿಹಾಳ ಮೋಮಿನ ಪೌಂಡೇಶನ ಮತ್ತು ಅವರ ಕುಟುಂಬ ವರ್ಗದವರು ಸಹಾಯಹಸ್ತ ಚಾಚಿದ್ದಾರೆ, ಬಡ ಕುಟುಂಬಗಳಿಗೆ ದಿನಶಿ ಪದಾರ್ಥಗಳ ಕಿಟ್ ವ್ಯವಸ್ಥೆ ಮಾಡಿದ್ದಾರೆ.ಇದರಲ್ಲಿ ಸಕ್ಕರೆ, ರವೆ, ಕಡ್ಲಿಬೇಳೆ, ತೊಗರಿ ಬೇಳೆ, ಅಡಿಗೆ ಎಣ್ಣೆ, ಚಹಾಪುಡಿ, ಸೇರಿದ ಸಾಮಗ್ರಿಗಳ ಕಿಟ್ನ್ನು ವಿತರಿಸಲಾಯಿತು. ಈ ಸಂದರ್ಭ ದಲ್ಲಿ ಪಿಎಸೈ ಮಲ್ಲಪ್ಪ ಮಡ್ಡಿ,ಎ ಡಿ ಮೋಮಿನ, ಇಸ್ಮಾಯಿಲ ಮೋಮಿನ,ಕಾರಿಇಸಾಕ ಮಾಗಿ ಅಂಜುಮನ ಸಧ್ಯಸರಾದ ಅಬ್ದುಲ ಮಜೀದ ಮಕಾಂದಾರ ಮತ್ತಿತರರು ಇದ್ದರು.