ಬ್ರೇಕಿಂಗ್ ನ್ಯೂಸ್ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿ ವತಿಯಿಂದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಣೆ 11/04/202011/04/2020 admin ಮೂಡಲಗಿ : ಕೊರೋನಾ ವೈರಸ್ ದಿಂದ ದೇಶದಲ್ಲಿ ಏ ೧೪ ರವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಪಟ್ಟಣದ ಬಡಜನರು, ಕೂಲಿಕಾರ್ಮಿಕರು,ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತಗಳನ್ನು ತರಲು ಹಣವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.ಪಂಚಮಸಾಲಿ ಕಡುಬಡವ ಕುಟುಂಬಗಳ ಪರಿಸ್ಥಿತಿ ಅರಿತುಕೊಂಡು ಸಮಾಜ ಬಾಂದವರಿಗೆ ಕೈಲಾದ ಸಹಾಯ ಸಲ್ಲಿಸಲು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಈ ಪಾಟೀಲ ಇವರ ನೇತೃತ್ವದಲ್ಲಿ ಸಂಘದ ಪಧಾದಿಕಾರಿಗಳು ಕಡು ಬಡವ ಕುಟುಂಬಗಳಿಗೆ ಅಗತ್ಯ ದಿನಸಿ ವಸ್ತುಗಳನ್ನು ಪಟ್ಟಣದಲ್ಲಿ ವಿತರಿಸಿದರು. Share