

ರಮೇಶ್ ಖೇತಗೌಡರ ಮಾತನಾಡಿ ಜನರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕಾರ ನೀಡಬೇಕು ಮತ್ತು ಮೆನೆ ಬಿಟ್ಟು ಹೊರಗೆ ಬರದಿದ್ದರೆ ಅವಾಗಲೇ ಕೊರೋನಾ ವೈರಸ್ ತಡೆಗಟ್ಟಲು ಸಾಧ್ಯ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದಿನಂಪ್ರತಿ ದುಡಿಮೆಯನ್ನೇ ಅವಲಂಬಿಸಿದ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದ್ದನ್ನು ಕಂಡ ರಮೇಶ ಖೇತಗೌಡರ್ ಅವರು ತಮ್ಮ ಸ್ವಂತಃ ಖರ್ಚಿನಲ್ಲಿಯೇ ಕುಟುಂಬಕ್ಕಾಗುವ ದಿನಸಿ ಸಾಮಾನುಗಳು ಜೊತೆಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿ ಕುಟುಂಬಗಳಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಆದರೆ ಉಳಿದೆಲ್ಲ ಪುರಸಭೆ ಸದಸ್ಯರು ಯಾರೂ ಕೂಡಾ ಈ ರೀತಿ ಜನರಿಗೆ ಸ್ಪಂದಿಸಿರುವುದಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಈ ಸಂದರ್ಭದಲ್ಲಿ ಶಂಕರ್ ಕಡಕಭಾವಿ, ಎಂ.ಎಂ.ಶೇಗುಣಸಿ, ಶಿವಾನಂದ ಕಡಕಭಾವಿ, ಸಿದ್ದು ಕುರಬೇಟ, ಸಿದ್ದು ಕುರಿಮನಿ, ಮುರುಗೇಶ್ ಕಿಡದಾಳ, ಶಿವಲಿಂಗ ಕಡಕಭಾವಿ, ಶ್ರೀಧರ ಕುಂಬಾರ, ಭರಮು ತೇಲಿ, ಹನಮಂತ ಬದ್ನಿಕಾಯಿ, ಅಜ್ಜು ಬನಶಂಕರಿ, ಕಬೀರ್ ಮುಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡು ಬಾಗಿಯಾಗಿದ್ದರು.