
ಮೂರುನೂರಕ್ಕೂ ಹೆಚ್ಚು ಜನರಿಗೆ ಅಲ್ಪೋಪಹಾರ ವಿತರಣೆ ಮಾಡಿ ಮಾತನಾಡಿದ ಶ್ರೀಶೈಲ ಲೋಣಾರಿ ಕನ್ನಡಪರ ಸಂಘಟನೆಗಳು ಕನ್ನಡಿಗರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತ ಬಂದಿದ್ದು ದೇಶದ ಸಂಕಷ್ಟದ ಈ ಸಮಯದಲ್ಲಿ ಸಾಕಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಷ್ಟೆ ಅಲ್ಲದೆ ಹಲವು ಇಲಾಖೆಯ ಸಿಬ್ಬಂದಿ ಕಾರ್ಯ ನೀರ್ವಹಿಸುತ್ತಿದ್ದು ಜನರ ಜೀವರಕ್ಷಣೆಗೆ ಶ್ರಮಿಸುತ್ತ ಕೊರೊನಾ ಹರಡದಂತೆ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ ಸೇವೆಗೆ ನಾವು ಋಣಿಯಾಗಿದ್ದೇವೆ ಎಂದರು.
ಈ ವೇಳೆ ಜಹಾಂಗೀರ್ ಮುಕ್ಕೇರಿ, ದಾವಲ್ ಶೇಖ್, ಜುಬೇರ ಭಾಗವಾನ, ನವೀದ್ ಮುಕ್ಕೇರಿ, ಹಾರೂನ್ ಪಠಾಣ, ಮತ್ತು ಉಮರ್ ಬಿರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.