ಕುಡಿದ ಅಮಲಿನಲ್ಲಿ ಶಾಸಕರಿಗೆ ಅಶ್ಲೀಲ ಪದಬಳಕೆ: ಐವರ ಬಂಧನ

ಕುಡಿದ ಅಮಲಿನಲ್ಲಿ ಶಾಸಕರಿಗೆ ಅಶ್ಲೀಲ ಪದಬಳಕೆ: ಐವರ ಬಂಧನ

ರಬಕವಿ-ಬನಹಟ್ಟಿ : ಕುಡಿದ ಅಮಲಿನಲ್ಲಿ ಶಾಸಕರೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ವ್ಯಾಟ್ಸಾಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಮೀಪದ ಕುಲಹಳ್ಳಿ ಗ್ರಾಮದ ಕಲ್ಲಪ್ಪ ಕಂಕಣವಾಡಿಯವರ ದೂರಿನನ್ವಯ ಈರಪ್ಪ ತಂಬಾಕು ಎಂಬುವರ ಕಬ್ಬಿನ ಹೊಲದಲ್ಲಿ ಗುರುವಾರ ಕಂಠಪೂರ್ತಿ ಕುಡಿದು ಬೇಕಾಬಿಟ್ಟಿಯಾಗಿ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿಯವರನ್ನು ಹಾಗೂ ಬಿಜೆಪಿ ಪಕ್ಷದ ಮುಖಂಡರನ್ನು ಅಶ್ಲೀಲವಾಗಿ ಬೈದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಐವರು, ಕುಲಹಳ್ಳಿ ಗ್ರಾಮದವರಾದ ರಮೇಶ ತೇಲಿ, ರಂಜಾನ್ ಕಾಲೇಖಾನ್, ಲಾಲಸಾಬ್ ಸಂತಿ, ಮಲ್ಲಯ್ಯ ಅವರಖೋಡ, ಬನಹಟ್ಟಿಯ ಸೀಮಂತ ಜಗದಾಳರನ್ನು ಬಂಧಿಸಿದ್ದಾರೆ. ಈ ಕುರಿತು ಬನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ತನಿಖೆ ಮುಂದುವರೆಸಿದ್ದಾರೆ.
Share
WhatsApp
Follow by Email