ಮುದ್ದೇಬಿಹಾಳ ತರಕಾರಿ ವ್ಯಾಪಾರಸ್ಥರ ಹಾಗೂ ತರಕಾರಿ ದಲ್ಲಾಳಿಗಳ ಸಭೆ

ಮುದ್ದೇಬಿಹಾಳ: ಕೋರೋನಾ ವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ನೀಡಿದ ಲಾಕ್ ಡಾನ್ ವೇಳೆ ಸಾರ್ವಜನಿಕರಿಗೆ ಅಗತ್ಯ ಜೀವನಾಂಶಕ ವಸ್ತುಗಳ ಖರಿದಿಗಾಗಿ ಅವಕಾಶ ಕಲ್ಪಿಸಲಾಗಿದೆ. ಕಾರಣ ಸಾರ್ವಜನಿಕರು ಸಮಾಜಿಕ ಅಂತರ ಕಾಯ್ದಯಕೊಳ್ಳುವ ಮೂಲಕ ದಿನಸಿಗಳನ್ನು ಖರಿದಿ ಮಾಡಿಕೊಳ್ಳಬೇಕು ಕಿರಾಣಿ, ತರಕಾರಿ ಹಾಲು, ಔಷಧಿ ಆಸ್ಪತ್ರೆ ಹೊರತು ಪಡಿಸಿ ಇನ್ನಿತರ ಯಾವೂದೇ ಅಂಗಡಿಗಳನ್ನು ತರೆಯುವಂತಿಲ್ಲ ಮುಂದಿನ ಸರಕಾರದ ಆದೇಶದವರೆಗೂ ನಿಷೇದಾಜ್ಞೇ ಜಾರಿಯಲ್ಲಿರುತ್ತದೆ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ತಹಶಿಲ್ದಾರ ಜಿ ಎಸ್ ಮಳಗಿ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧ ಸಭಾಭವನದಲ್ಲಿ ಗುರವಾರ ಕಿರಾಣಿ ವರ್ತಕರು ದಿನಸಿ ಅಂಗಡಿ, ತರಕಾರಿ ವ್ಯಾಪಾರಸ್ಥರ ಹಾಗೂ ತರಕಾರಿ ದಲ್ಲಾಳಿಗಳ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಇಡೀ ವಿಶ್ವವ್ಯಾಪಿ ಕೋರೋನಾ ರೋಗ ಬೀತಿಯಿಂದ ಜನರು ತತ್ತರಿಸಿಹೋಗಿದ್ದಾರೆ ಅದರಂತೆ ತಾಲೂಕಿಗೆ ಈ ಮಹಾಮಾರಿ ರೋಗ ಹರಡದಂತೆ ಏನೇಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿರ್ಮಾನಿಸಿ ಜನರ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ಬಿಗಿ ಬಂದೋಬಸ್ತ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ ಮಾತನಾಡಿ ಯಾವೂದೋ ಒಂದು ವಯಕ್ತಿಕ ಹಿತಾಸಕ್ತಿಯಿಂದ ಈ ತಿರ್ಮಾನ ಕೈಗೊಳ್ಳಲಾಗಿಲ್ಲ ಕೋರೋನಾ ವೈರಾಣು ತಾಲೂಕಿನಲ್ಲಿ ನುಸುಳದಂತೆ ಒಬ್ಬರಿಂದ ಇನ್ನೊಬ್ಬರಿ ಹರಡದಂತೆ ಈ ರೀತಿ ತಿರ್ಮಾನ ಕೈಗೊಳ್ಳಲಾಗಿದೆ.
ಇದು ಹೀಗೇ ಎಷ್ಟು ದಿನಗಳವರೆಗೆ ಇರುತ್ತದೆ ಏನೋ ಗೊತ್ತಿಲ್ಲ ಕಾರಣ ಜನರಿಗೆ ದಿನಬಳಕೆಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ಜೀವನಾಂಶ ವಸ್ತಗಳನ್ನು ಒದಗಿಸುವ ಸರಕಾರದ ಕರ್ತವ್ಯವೂ ಕೂಡ ಆಗಿದೇ ಈ ನಿಟ್ಟಿನಲ್ಲಿ ಕಿರಾಣಿ, ದಿನಸಿ ಅಂಗಡಿ ವ್ಯಾಪಾರಸ್ತರು ಸಂಪೂರ್ಣ ಅಂಗಡಿಗಳನ್ನು ತೆರೆಯದೇ ಜನರಿಗೆ ಬೇಕಾಗುವ ಜೀವನಾಂಶ ವಸ್ತುಗಳನ್ನು ಮನೆಮನೆಗೆ ತಲುಪಿಸುವ ಅವಕಾಶ ನೀಡಿದೆ ಅದರಂತೆ ತರಕಾರಿ ವ್ಯಾಪಾರಸ್ತರು ಒಂದೇ ಕಡೆ ಇಟ್ಟುಕೊಂಡು ಮಾರಾಟ ಮಾಡುವ ಬದಲಾಗಿದೆ ಪಟ್ಟಣದ ಪ್ರತಿ ವಾರ್ಡುಗಳಿಗೆ ತಳ್ಳುವ ಗಾಡಿ, ಅಟೋ ಸೇರಿದಂತೆ ಇತರೇ ವಾಹಗಳ ಮೂಲಕ ವ್ಯಾಪಾರ ಮಾಡಲು ಪುರಸಭೆಯಿಂದ ಪರವಾನಿ ಪತ್ರ ನೀಡಲಾಗುವುದು ಅಂತಹವರು ಮಾತ್ರ ವ್ಯಾಪಾರ ಮಾಡಬಹುದು ಎಂದರು.
ಈ ಸoದರ್ಭದಲ್ಲಿ ಸಿಪಿಐ ಆನಂದ ವಾಗ್ಮೋರೆ ಹಾಗೂ ಪಿಎಸ್ ಮಲ್ಲಪ್ಪ ಮಡ್ಡಿ ಅವರು ಮಾತನಾಡಿ ಸರಕಾರದ ಆದೇಶವನ್ನು ಉಲ್ಲಂಘಸಿ ನಡೆದುಕೊಂಡರೇ ಯಾರೇ ಅಗಿರಲಿ ತಕ್ಷಣವೇ ಅಂತವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟ ಲಾಗುವುದು ಈಗಾಗಲೇ ಸಾಕಷ್ಟು ಬಾರಿ ತೀಲಿಸಿದರು ಸಾರ್ವಜನಿಕರು ಸಂಚಾರ ಮಾಡುವುದು ಗುಂಪು ಗುಂಪಾಗಿ ನಿಲ್ಲುವುದು ಕಡಿಮೇಯಾಗಿಲ್ಲ ಅದಕ್ಕೆಲ್ಲ ಈಗಲೇ ಮುಕ್ತಾಯ ಹೇಳಬೇಕು ಎಂದರು.ಈ ವೇಳೆ ಗಣ್ಯ ವ್ಯಾಪಾರಸ್ತರಾದ ಗಫೂರಸಾಬ ಮಕಾನದಾರ, ಅಪ್ಪು ದೇಗಿನಾಳ,ವಿ ಕೆ ದೇಶಪಾಂಡೆ ,ಪಿಂಟು ಸಾಲಿಮನಿ ಸೇರಿದಂತೆ ಮತ್ತಿತರರು ಇದ್ದರು.

Share
WhatsApp
Follow by Email