ದೊಡವಾಡ ಚೆಕ್ ಪೋಷ್ಟ್ ಬಳಿ ಬಂದ ನಾಗರ ಹಾವು ಉರಗ ತಜ್ಞರಿಂದ ಹಿಡಿಸಿ ಗುಡ್ಡದ ಕಡೆಗೆ ಬಿಡಿಸಿದ ಕರ್ತಯವ್ಯ ನಿರತ ಸಿಬ್ಬಂದಿ

ಬೈಲಹೊoಗಲ : ಕೊರೋನಾ ಹಾವಳಿಯಿಂದ ರಾಜ್ಯಾದ್ಯಾಂತ ಕಟ್ಟು ನಿಟ್ಟಿನ ಲಾಕ್ ಡೌನ್ ಘೋಷಣೆಯಾಗಿದ್ದು ಅಂತರ್ ಜಿಲ್ಲೆ ಗಡಿ ಬಂದ್ ಮಾಡುವ ಉದ್ದೇಶದಿಂದ ತಾಲೂಕಿನ ಗುಡಿಕಟ್ಟಿ ಕ್ರಾಸ್ ಬಳಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನ ಮತ್ತು ನಾಗರೀಕರ ಸಂಚಾರ ಸಂಪೂರ್ಣ ಬಂದ ಮಾಡಲಾಗಿದೆ.
ಭಾನುವಾರ ಮಧ್ಯಾಹ್ನ ಈ ಚೆಕ್ ಪೋಷ್ಟ್ ಬಳಿ ಭಾರಿ ಗಾತ್ರದ ನಾಗರ ಹಾವೊಂದು ಕಾಣಿಸಿಕೊಂಡು ಕರ್ತವ್ಯ ನಿರತ ಪೋಲಿಸರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಪಂ ಸಿಬ್ಬಂದಿಯವರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಮಧ್ಯಾಹ್ನದ ರಣ ಬಿಸಿಲಿನಲ್ಲಿ ರಸ್ತೆಯ ಒಂದು ಬದಿಯ ಹೊಲದಿಂದ ಸಾಗಿ ಮತ್ತೊಂದು ಕಡೆಯಿದ್ದ ಜೋಳದ ಕಣಕಿ ಬಣವೆಯಲ್ಲಿ ಹಾವು ಅವಿತು ಕುಳಿತುಕೊಂಡಿತ್ತು. ರಾತ್ರಿ ಪಾಳಿಯಲ್ಲಿಯೂ ಕೂಡ ಇಲ್ಲಿ ಕೆಲಸ ಮಾಡಬೇಕಾದ್ದರಿಂದ ಕರ್ತವ್ಯ ನಿರತರಲ್ಲಿ ಹಾವು ಮತ್ತಷ್ಟು ಭಯ ತಂದಿಟ್ಟಿತ್ತು. ಬಳಿಕ ಚೆಕ್ ಪೋಷ್ಟ ಬಳಿಯ ಮನೆಯ ನಿವಾಸಿ ಶಿವಾನಂದ ಬೆಳವಡಿ ಗ್ರಾಮದ ಉರಗ ತಜ್ಞ ಶಿವಾಜಿ ಗಂಡಗುದರಿಯವರನ್ನು ಕರೆಸಿ ಭಾರಿ ಗಾತ್ರದ ನಾಗರ ಹಾವನ್ನು ಹಿಡಿಸಿ ಉಪ್ಪಿನ ಬೆಟಗೇರಿ ಸಮೀಪದ ಗುಡ್ಡದ ಕಡೆ ಬಿಟ್ಟು ಬಂದ ನಂತರ ಚೆಕ್ ಪೋಷ್ಟ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಯಿತು.
Share
WhatsApp
Follow by Email