
ಪಟ್ಟಣದ ಪರಿಸ್ಥಿತಿಯ ಅವಲೋಕನ ಮಾಡಿ ಬುದ್ನಿ(ಪೀಡಿ) ಚೆಕ್ಪೋಸ್ಟ್ ಹತ್ತಿರ ಮಾತನಾಡುತ್ತಿದ್ದ ಅವರು ಅನೇಕ ಪರಿಹಾರಗಳನ್ನು ತಿಳಿಸಿದರೂ ಕೂಡ ಜನತೆ ತಮ್ಮದೇಯಾದ ಜೀವನ ಶೈಲಿಯನ್ನು ಮುಂದುವರಿಸಿಕೊoಡು ಹೋಗುತ್ತಿದ್ದಾರೆ. ಈಗಾಗಲೇ ಪ್ರಪಂಚದಾದ್ಯoತ ಈ ಭಯಾನಕ ರೋಗದಿಂದ ಲಕ್ಷಾಂತರ ಜನರು ಬಲಿಯಾಗುತ್ತಿದ್ದ ವಿಷಯ ಕಳವಳಕಾರಿಯಾಗಿದೆ.ಈ ರೋಗದಿಂದ ದೇಶದ ಜನತೆಯ ಸುರಕ್ಷತೆಗಾಗಿ ಸರ್ಕಾರ, ಅಧಿಕಾರಿಗಳು ಹಲವಾರು ರೀತಿಯ ಪ್ರಯತ್ನಗಳು ಸಾಗಿವೆ ವರಸೆಗಳನ್ನು ಪ್ರಯೋಗಿಸುತ್ತಾ ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನಕ್ಕೆ ಜನತೆ ಸರಿಯಾಗಿ ಸ್ಪಂದಿಸಿದರೆ ರೋಗವನ್ನು ಹತೋಟಿಯಲ್ಲಿಡಬಹುದು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ವರ್ತಿಸಿ ಸಮುದಾಯಗಳಲ್ಲಿ ವೈರಸ್ ಏನಾದರೂ ಕಂಡು ಬಂದರೆ ಈ ರೋಗದಿಂದ ದೇಶದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ ಕಾರಣ ಪಟ್ಟಣದಲ್ಲಿ ಇನ್ನಷ್ಟು ಬಿಗಿ ಭದ್ರತೆ ಏರ್ಪಡಿಸಿ ಸುತ್ತಲೂ ನಾಕಾಬಂದಿ ಹಾಕಲಾಗಿದೆ ಎಂದರು.
ಪಟ್ಟಣದ ಅವಲೋಕನದ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ ಚನಗೊಂಡ,ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಆರೋಗ್ಯ ಇಲಾಖೆ ಸಿಬ್ಬಂದಿ,ಪೊಲೀಸ್ ಇಲಾಖೆ, ಗ್ರಹ ರಕ್ಷಕ ದಳ ಸಿಬ್ಬಂದಿಗಳಿದ್ದರು.