ಪತ್ರಕರ್ತರಿಂದ ಜನರ ಕೈ ಮುಗಿದು ಗುಲಾಬಿ ಕೊಟ್ಟು ಮನವಿ

ಪತ್ರಕರ್ತರಿಂದ ಜನರ ಕೈ ಮುಗಿದು ಗುಲಾಬಿ ಕೊಟ್ಟು ಮನವಿ

ಅಥಣಿ : ಪಟ್ಟಣದಲ್ಲಿ ಕೊರೊನಾ ವೈರಸ್ ಜಾಗೃತಿ ಅಂಗವಾಗಿ ಅಥಣಿ ಪಟ್ಟಣದ ಕಾರ್ಯನಿರತ ಪತ್ರಕರ್ತರು ಸಾರ್ವಜನಿಕರಿಗೆ ಗುಲಾಬಿ ಕೊಟ್ಟು ಕೈ ಮುಗಿದು ವಿನಂತಿಸುವ ಮೂಲಕ ಅರಿವು ಮೂಡಿಸಿದರು.
ಕೊರೊನಾ ವೃರಸ್ ನಿಂದ ಉಂಟಾಗಿರುವ ಭಾರತ ಲಾಕ್ ಡೌನ್ ಇಂದು ಒಂಭತ್ತನೆ ದಿನಕ್ಕೆ ಕಾಲಿಟ್ಟಿದ್ದು ರಾಜ್ಯ ಸರ್ಕಾರ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಬೀಸದಂತೆ ಆದೇಶಿಸಿದ ಬೆನ್ನಲ್ಲೆ ರಸ್ತೆಯಲ್ಲಿ ಅನವಶ್ಯಕವಾಗಿ ಬೈಕ್ ಚಲಾಯಿಸುತ್ತಿದ್ದ ಸಾರ್ವಜನಿಕರನ್ನು ತಡೆದು ಮನೆಯಿಂದ ಹೊರಬರದಂತೆ ಮನವಿ ಮಾಡಲಾಯಿತು.
ಈ ವೇಳೆ ಮಾತನಾಡಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ ಶಿಂಧೇ
ಕೊರೊನಾ ಕಟ್ಟೆಚ್ಚರದ ನಡುವೆಯೂ ವಿನಾಕಾರಣ ರಸ್ತೆಗೆ ಇಳಿಯುತ್ತಿರುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಕೂಡುತ್ತಿರುವ ಸಾರ್ವಜನಿಕರಿಗೆ ಗುಲಾಬಿ ನೀಡಿ ಕೈ ಮುಗಿದು ಅನಿವಾರ್ಯತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ ಅನವಶ್ಯಕವಾಗಿ ಬರಬೇಡಿ ಹೊರಗೆ ಬರುವಾಗ ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಜರ್ ಬಳಸುವಂತೆ ಹೇಳುವ ಮೂಲಕ ಜನರಲ್ಲಿ ಕೊರೊನಾ ಹರಡದಂತೆ ಮತ್ತು ಅಮೂಲ್ಯ ಜೀವಗಳನ್ನು ಉಳಿಸುವಂತೆ ಹಾಗೂ ಲಾಕ್ ಡೌನ್ ಗೆ ಸಹಕರಿಸುವಂತೆ ಜಾಗೃತಿ ಮೂಡಿಸುವ ಕೆಲಸಕ್ಕೆ ಅಥಣಿ ತಾಲೂಕಿನ ಕಾರ್ಯನಿರತ ಪತ್ರಕರ್ತರು ಮುಂದಾಗುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿ ಮೆರೆದಿದ್ದೇವೆ ಎಂದು ಹೇಳಿದರು.
ಈ ವೇಳೆ ಅಥಣಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರ ತೆವರಟ್ಟಿ.ಉಪಾಧ್ಯಕ್ಷ ಅಣ್ಣಾ ಸಾಹೇಬ್ ತೇಲಸಂಗ.ಸಿ ಎ ಇಟ್ನಾಳಮಠ.
ಪ್ರಧಾನ ಕಾರ್ಯದರ್ಶಿ ದೀಪಕ ಶಿಂಧೇ, ಕಾರ್ಯದರ್ಶಿ ಪ್ರಕಾಶ ಕಾಂಬಳೆ,ಖಜಾoಚಿ ಸತೀಶ ಕೋಳಿ ಹಾಗೂ ಸದಸ್ಯರಾದ ಶಿವಕುಮಾರ ಅಪರಾಜ. ವೇಕಟೇಶ ದೇಶಪಾಡೆ.ರಮೇಶ್ ಬಾದವಾಡಗಿ. ರಾಕೇಶ್ ಮೈಗೂರ, ಮತ್ತು ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ,ಪತ್ರಕರ್ತರಾದ ಮಹಂತೇಶ್ ಬನಸೋಡೆ,ಪರಶುರಾಮ ಚುಬಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email