ಅರಟಾಳ ; ಸಮೀಪದ ಐಗಳಿ ಕ್ರಾಸ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದು. ಇನ್ನುಳಿದ ಇಬ್ಬರಿಗೆ ಗಾಯಗಳಾಗಿದ್ದು. ಗಾಯಾಳುಗಳನ್ನು ಅಥಣಿ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಜಯಪೂರ ಜಿಲ್ಲೆಯ ಮುದ್ದೆಬಿಹಾಳದಿಂದ ಕಟಗೇರಿಗೆ ತೆರಳುವಾಗ ಕಾರ ಅಪಘಾತ ಸಂಭವಿಸಿದೆ. ಕಾರ ಚಾಲಕ ಕಟಗೇರಿ ಗ್ರಾಮದ ಹಣಮಂತ ಸಾರವಾಡ ವಯಾ 34 ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.