
ಪೊಲೀಸ್ ಠಾಣೆಯ 45 ಸಿಬ್ಬಂದಿ ಹಾಗೂ ಅವರ ಪರಿವಾರಗಳಿಗೆ ಹೋಮಿಯೋಪತಿ (ಫಾರ್ಮಲ್ ಲೆಟೇಡ್) ಔಷಧಿಯನ್ನು ವಿತರಿಸಿ ಸಂಘದ ಅಧ್ಯಕ್ಷ ಡಾ.ಯು.ಎಸ್.ವನಹಳ್ಳಿ ಮಾತನಾಡಿ, ಕೋರೋಣ ಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿಊ=ಅ19 ಔಷಧಿಯು ಮಾನವ ದೇಹದಲ್ಲಿ ಹೊರಗಿನಿಂದ ಬರುವ ರೋಗಾಣುವನ್ನು ಸೈನಿಕರ ತರಹ ಹೋರಾಡಿ ಪ್ರತಿರೋಧ ಒಡ್ಡಿ ಪ್ರತಿಬಂಧಿಸಿ ನಾಶ ಮಾಡುತ್ತದೆ.
ಆದ್ದರಿಂದ ಹೋಮಿಯೋಪತಿ ಶಾಸ್ತ್ರದಲ್ಲಿ ಎರಡು ಶತಮಾನಗಳ ಹಿಂದೆ ಡಾ.ಹಾನೇಮನ್ ವಿಜ್ಞಾನಿ ಇದಕ್ಕೆ ಪೂರಕವಾದ ಸಾಕಷ್ಟು ಸೂಕ್ತ ಗ್ರಂಥಗಳನ್ನಲದೆ ಅನೇಕ ದಾಖಲೆಗಳನ್ನೂ ಒದಗಿಸಿದ್ದಾರೆ.ಈಗಲೂ ಸಹಿತ ಇವುಗಳನ್ನು ಪ್ರತ್ಯಕ್ಷವಾಗಿ ನಾವು ಕಾಣಬಹುದು.
ಉಪಯೋಗಿಸುವ ವಿಧಾನ : ಉಗುರು ಬೆಚ್ಚಗಿನ ಅರ್ಧ ಕಪ್ ನೀರಿನಲ್ಲಿ ಹತ್ತು ಹನಿ ಹಾಕಿ ಮೂರು ದಿವಸ ಎರಡು ಹೊತ್ತು ತೆಗೆದುಕೊಂಡರೆ ಕೊರೊನಾ ವೈರಸ್ ಬರುವುದೇ ಇಲ್ಲ, ಇದನ್ನು ಆಯುಷ್ಯ ವಿಭಾಗದ ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ದೃಢಪಡಿಸಿ ಆದೇಶ ಹೊರಡಿಸಿದೆ. ಜನತೆಯು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದರು.
ಸಂದರ್ಭದಲ್ಲಿ ಅಧಿಕಾರಿ ಗಿರಿಮಲ್ಲಪ್ಪ ಉಪ್ಪಾರ, ತನಿಖಾ ಸಹಾಯಕರಾದ ಅಶೋಕ ಸೌದಿ, ಬಿ ಎಸ್ ನಾಯಕ್, ಸಿಬ್ಬಂದಿಗಳಾದ ಮಲ್ಲು ಕನಶೆಟ್ಟಿ, ಎಸ್ಎಸ್ ಬಂಗಾರಿ ,ಶ್ರೀಕಾಂತ್ ಬೆನಕಟ್ಟಿ, ಮದರಖಂಡಿ,ಶ್ರೀಮತಿ ಸುರೇಖಾ ನಾವಿ, ರೇಣುಕಾ ಪಾಟೀಲ್, ನಿವೃತ್ತ ಬಿ.ಎಂ. ಕೋಟನ್ನವರ್ ಇದ್ದರು.