ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು  ಶೋಭೆ ಅಲ್ಲ: ತನ್ವೀರ್ ಸೇಠ್ ಅಸಮಾಧಾನ

ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಶೋಭೆ ಅಲ್ಲ: ತನ್ವೀರ್ ಸೇಠ್ ಅಸಮಾಧಾನ

ಮೈಸೂರು: ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಯಾರಿಗೂ ಶೋಭೆ ತರುವ ಕೆಲಸವಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ನಿನ್ನೆ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಯಾರಿಗೂ ಶೋಭೆ ತರುವಂತಹ ಕೆಲಸವಲ್ಲ. ಅದರಲ್ಲೂ ವೈಯುಕ್ತಿಕವಾಗಿ ಏನಿದೆ ಎಂಬುದನ್ನು ನಾನಿನ್ನು ವಿವರಣೆಯನ್ನು ಪಡೆದುಕೊಂಡಿಲ್ಲ. ಈ ಸಂದರ್ಭ ಜನರು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೊರೋನಾದಿಂದ ಚಿಕಿತ್ಸೆ ಪಡೆಯುವಂಥದ್ದು, ಅವರ ಪ್ರಾಣವನ್ನು ಉಳಿಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಚುನಾಯಿತ ಪ್ರತಿನಿಧಿಯಾಗಿರಬಹುದು, ಅಧಿಕಾರಿ ವರ್ಗದವರಾಗಿರಬಹುದು, ಸಂಘ ಸಂಸ್ಥೆಗಳಾಗಿರಬಹುದು, ಅಥವಾ ಪ್ರತ್ಯೇಕವಾಗಿ ಪ್ರತಿಯೊಬ್ಬ ಇದರಲ್ಲಿ ತನನ್ನನ್ನು ತೊಡಗಿಸಿಕೊಂಡು ಏನು ಕೆಲಸವನ್ನು ಮಾಡುತ್ತಿದ್ದಾನೆ ಒಟ್ಟಾರೆ ವ್ಯವಸ್ಥೆಗೆ  ತಲೆ ತಗ್ಗಿಸುವ ಕೆಲಸ ಆಗಿದೆ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಚಾರ ಏನೇ ಇರಬಹುದು. ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಕೆಲಸ ಸಾಧ್ಯವಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರು 24ಗಂಟೆ ನಾನು ಇಲ್ಲಿರಲಿಕ್ಕಾಗಲ್ಲ, ನಾನು ಬೆಂಗಳೂರು ನನ್ನ ಕ್ಷೇತ್ರ ಕೂಡ ನೋಡಿಕೊಳ್ಳಬೇಕು. ಇಲ್ಲಿ ನೀವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿ, ನಿಮಗೆ ಏನು ಬೇಕಾದರೂ ಫ್ರಿ ಹ್ಯಾಂಡ್ ಕೊಡುತ್ತೇನೆ ಎಂದಿದ್ದರು. ಬಹುಶಃ ಅತಿ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದೇ ಈ ಎಲ್ಲಾ ವಿಚಾರಗಳಿಗೆ ಎಡವಟ್ಟು ಮಾಡುವ ಕೆಲಸವಾಗಿದೆ. ಸಂಸದರು ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಅವರ ವಿಚಾರಗಳ ಮಂಡನೆ ಮಾಡಿದಾಗ ಅವರ ವೈಯುಕ್ತಿಕವಾಗಿ ತೆಗೆದುಕೊಳ್ಳುವಂತದ್ದು. ಅವರವರ ಸ್ಥಾನದಲ್ಲಿ ಜವಾಬ್ದಾರಿ ಬೇರೆ ರೀತಿಯಲ್ಲಿಯೇ ಇರುತ್ತೆ. ಸಿಎಸ್ ಆರ್ ಫಂಡಿಂಗ್ ಕೇಂದ್ರೀಕೃತವಾಗಬೇಕು, ಜಿಲ್ಲೆಗೆ ಬರಬೇಕು ಅನ್ನೋದು ಜಿಲ್ಲಾಧಿಕಾರಿಗಳ ವಿಚಾರವಾಗಿದ್ದರೆ ನಗರಪಾಲಿಕೆ ಮೇಲೆ ತನ್ನದೇ ಆದ ಜವಾಬ್ದಾರಿಗಳನ್ನು ಕೊಟ್ಟಿದ್ದರು. ಬಹುಶಃ ಈ ಎಲ್ಲಾ ವಿಚಾರಗಳಿಗೆ ವಿವರವಾಗಿ ತನಿಖೆ ಆಗಬೇಕು. ಈ ವಿಚಾರ ಸಾರ್ವಜನಿಕರಿಗೆ ಬೇಕಾಗಿರುವ ವಿಚಾರ ಅಲ್ಲ. ಸಾರ್ವಜನಿಕರಿಗೆ ಇಂದು ಸಹಾಯ ಹಸ್ತ ಬೇಕಾಗಿದೆ. ಇಲ್ಲಿ ಯಾರ ಪರ, ಯಾರ ವಿರೋಧ ಅಲ್ಲ, ಇದು ಸರ್ಕಾರಿ ವ್ಯವಸ್ಥೆ ಇಲ್ಲಿ ಅಧಿಕಾರಿಗಳು ಒಂದೇ ಕಡೆ ಶಾಶ್ವತ ಅಲ್ಲ, ಚುನಾಯಿತ ಜನಪ್ರತಿನಿಧಿಗಳು ಶಾಶ್ವತವಾಗಿ ಇರ್ತಾರೆ ಅಂತ ಹೇಳಕಾಗಲ್ಲ, ಈ ವ್ಯವಸ್ಥೆ ಅಡಿಯಲ್ಲಿ ಯಾರು ಎಲ್ಲಿ ಇರಬೇಕು ಅನ್ನುವುದನ್ನು ಸರ್ಕಾರ ಮಾಡಬೇಕಾಗಿರುವಂಥದ್ದು ಎಂದರು. ಅಂತಹ ಸನ್ನಿವೇಶದಲ್ಲಿ ಇದಕ್ಕೆ ವಿವರವಾದ ವಿಚಾರಣೆ ಆಗಿ ಸತ್ಯ ಸಂಗತಿಗಳು ಹೊರಗೆ ಬರಬೇಕು. ಇದಕ್ಕೆ ವ್ಯವಸ್ಥೆ ಕಾರ್ಯರೂಪಕ್ಕೆ ಬರುವ ಜನರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಸ್ಥೆ ತತ್ ಕ್ಷಣದಿಂದ ಜಾರಿಯಾಗಬೇಕು. ವರ್ಗಾವಣೆ ಮಾಡುತ್ತಿರೋ, ಅವರನ್ನೇ ಇಟ್ಟುಕೊಂಡು ಮುಂದುವರಿತಿರೋ ನಮಗೆ ಅದು ಬೇಡ. ಇಂದು ಇಡೀ ರಾಜ್ಯದಲ್ಲಿ ಪದೇ ಪದೇ ಮೈಸೂರು ಹೊರಬರುತ್ತಿದೆ. ಕೊರೋನಾ ವಿಚಾರದಲ್ಲೂ ಅತಿ ಹೆಚ್ಚಿನ ಪಾಸಿಟಿವಿಟಿ ನಮ್ಮ ಜಿಲ್ಲೆಯಲ್ಲಿದೆ. ನಿಯಂತ್ರಣಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದರೂನು ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಶಾಸಕ ರಾಮದಾಸ್ ಪ್ರತಿಕ್ರಿಯಿಸಿ  ಅಧಿಕಾರಿಗಳ ಕಿತ್ತಾಟ ಒಳ್ಳೆಯ ಸಂದೇಶವನ್ನು ಕಿರಿಯ ಅಧಿಕಾರಿಗಳಿಗೆ ನೀಡಲ್ಲ, ಆಡಳಿತ ಚೆನ್ನಾಗಿರಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹೆಡ್ ಆಗಿದ್ದುಕೊಂಡು ಎಲ್ಲವನ್ನೂ ಮಾನಿಟರ್ ಮಾಡುತ್ತಾರೆಂದು ತಿಳಿಸಿದರು.

Share
WhatsApp
Follow by Email