![](http://kannadatoday.in/wp-content/uploads/2020/03/IMG-20200319-WA0080-1024x768.jpg)
![](http://kannadatoday.in/wp-content/uploads/2020/03/IMG-20200319-WA0076-1024x768.jpg)
ಪ್ರತಿದಿನ ನೂರಾರು ವಾಹನ ಸವಾರರು ಹಾಗೂ ಬೇರೆ ಪರ ಸ್ಥಳಗಳಿಂದ ಬರುವಂತ ವ್ಯಾಪಾರಿಗಳ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಯಲ್ಲಿ ಅಡ್ಡಲಾಗಿರುವ ಗುಂಡಿಯನ್ನು ನೋಡದೆ ವಾಹನ ಚಲಾಯಿಸಿದರೆ ವಾಹನ ಸವಾರರು ಬಿದ್ದು ಕೈಕಾಲುಗಳು ಮುರಿಯುವುದು ಕಟ್ಟಿಟ್ಟ ಬುತ್ತಿ. ಹೀಗಿರುವಾಗ ಮೂಡಲಗಿ ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸಿಲ್ಲ.
ಪುರಸಭೆ ಅಧಿಕಾರಿಗಳು ಆಗಬೇಕಾದ ಕೆಲಸಗಳನ್ನು ವೇಗವಾಗಿ ಪೂರ್ಣ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗುಂಡಿಯನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಪ್ರಜ್ಞಾವಂತರ ಮಾತಾಗಿದೆ.