
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುಧೀರ ಪಾಟೀಲ ಮಾತನಾಡಿ, ಈ ಸಂಘದಿoದ ಮುಂದಿನ ದಿನಗಳಲ್ಲಿ ರೈತರಿಗೆ ಅನಕೂಲವಾಗುವ ರೀತಿಯಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ರೋಪಿಸಲಾಗುವದು.
ರೈತರಿಗೆ ಗೂಬ್ಬರ- ಬೀಜಗಳ ವಿತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ತಂದು ರೈತರ ಅಭಿವೃದಿಗೆ ಪ್ರಯತ್ನಿಸಲಾಗುವದೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಚಂದ್ರಶೇಖರ ಕಲ್ಲೂರ ರೈತರಿಗೆ ಶೇರು ಪತ್ರಗಳನ್ನು ವಿತರಿಸಿ ಮಾತನಾಡಿದರು. ನಿಂಗಪ್ಪ ಅತ್ತುಗೋಳ, ರಮೇಶ ಮೇಲಿನಮನಿ, ರಾಮನಗೌಡ ಪಾಟೀಲ, ಇಂಡಿಯನ ಗ್ಯಾಸ ವಿತರಕ ಸುಬಾಷ ಪಡೇನ್ನವರ, ವಿಶ್ವಜ್ಯೋತಿ ಶಿಕ್ಷಣ ಹಾಗೂ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಭೀಮನಗೌಡ ಪಾಟೀಲ, ಮಲ್ಲಿಕ ಕುರಬರ, ಸಂಗಪ್ಪ ಬುಕ್ಕಟಗಿ ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ರೈತರು, ಶೇರುದಾರರು ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಭರತ ಪಾರಿಶ್ವಾಡ ಸ್ವಾಗತಿಸಿ, ನಿರೂಪಿಸಿದರು