ಅಥಣಿ: ತಾಲೂಕಿನ ಘಟನಟ್ಟಿ ಗ್ರಾಮದ ಮೂರು ಜನ ಪುರುಷರು ಒಬ್ಬ ಮಹಿಳೆ ಜಮಖಂಡಿ ತಾಲೂಕಿನ ಹಿಪ್ಪರಗಿಗೆ ಬೀಗರಿಗೆ ಭೇಟಿಯಾಗುವ ಸಲುವಾಗಿ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಹಿಪ್ಪರಗಿ ಡ್ಯಾಮ್ ಮೇಲೆ ರಸ್ತೆ ಬಂದ್ ಆಗಿದ್ದರಿಂದ ಚಿಕ್ಕ ಬುಟ್ಟಿಯ ನಾವಿನಲ್ಲಿ ಡ್ಯಾಮ್ ಒಳಗಡೆಯ ಕೃಷ್ಣಾ ನದಿಯ ನೀರಿನಲ್ಲಿ ನದಿ ದಾಟುತ್ತಿರುವಾಗ ದೋಣಿ ಬುಡಮೇಲಾಗಿ ಮೂರು ಜನ ಪುರುಷರು ಈಜಿ ಪಾರಾಗಿದ್ದು ಒಬ್ಬ ಮಹಿಳೆ ನೀರುಪಾಲಾಗಿ ಮರಣವನ್ನಪ್ಪಿದ ಘಟನೆ ಕೃಷ್ಣಾ ನದಿಯಲ್ಲಿ ಜರುಗಿದೆ. ಕೃಷ್ಣಾ ನದಿಯಲ್ಲಿ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿದೆ