ಅಥಣಿ :ಕೋವಿಡ್-19 ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ ಸಂಸದ ಅಣ್ಣಾಸಾಹೇಬ ಜೋಲೆ.

ಅಥಣಿ: ನಮ್ಮ ಜಿಲ್ಲೆಯಲ್ಲಿ ಕೋವಿಡ್-19 ಬಂದಿಲ್ಲ ಎಂಬ ಉದಾಸೀನ ಯಾವುದೇ ಕಾರಣಕ್ಕೂ ಮಾಡದಿರಿ, ರಾಜ್ಯದಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಅಧಿಕಾರಿಗಳು ಜನರಲ್ಲಿ ಜಾಗ್ರತಿ ಮೂಡಿಸುವದರ ಜೊತೆಗೆ ಅಗತ್ಯ ಸಿದ್ದತಾ ಕ್ರಮಗಳನ್ನು ಕೂಡಲೇ ಮಾಡಿಕೊಳ್ಳಬೇಕು ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ತಾ.ಪಂ ಸಭಾ ಭವನದಲ್ಲಿ ತಾಲೂಕಾಡಳಿತದೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಕೋವಿಡ್-19 ಅಥವಾ ಕೋರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಲಾಕಡೌನ್ ಘೋಷಿಸಿದೆ. ಅಲ್ಲದೇ ಚಿಕಿತ್ಸೆಗೆ ಬೇಕಾಗುವ ಅಗತ್ಯ ಸವಲತ್ತು ಮತ್ತು ಹಣಕಾಸಿನ ನೆರವು ನೀಡುತ್ತಿವೆ. ಈ ವೈರಾಣು ನಮ್ಮ ಜನರಿಗೆ ಹರಡದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸುವದು ಅಗತ್ಯವಿದೆ.ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಮೂಲಕ ಜನಜಾಗ್ರತಿ ಮೂಡಿಸಬೇಕು. ಜನರು ಮನೆಯಿಂದ ಹೊರಗೆ ಬರದಂತೆ ತಿಳುವಳಿಕೆ ನೀಡಿ, ಅವರಿಗೆ ಬೇಕಾಗುವ ಅಗತ್ಯ ವಸ್ತುಗಳ ಪುರೈಕೆಗೆ ವ್ಯವಸ್ಥೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪಾಸಿಟಿವ್ ಪ್ರಕರಣಗಳು ವರಿಯಾಗದೇ ಇರುವದು ಅತ್ಯಂತ ಸಮಾದಾನಕರ ಸಂಗತಿಯಾಗಿದೆ.ಆದರೆ ಉದಾಸೀನತೆ ಬೇಡ,ನೇರೆಯ ಮಹಾರಾಷ್ಟ್ರದಲ್ಲಿ ಸೊಂಕಿತರ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೊರಗಿನಿಂದ ಬಂದವರ ಮೇಲೆ ನಿಗಾ ಇಡುವದು ಅಗತ್ಯವಿದೆ ಎಂದು ಹೇಳಿದರು.
2 ತಿಂಗಳ ಪಡಿತರ ಒಮ್ಮೆಲೆ ನೀಡಿ:
ಜನರು ಮನೆಯಿಂದ ಹೊರಗೆ ಬರದೇ ಇರುವದರಿಂದ ದಿನಸಿ ವಸ್ತುಗಳ ಮತ್ತು ಪಡಿತರ ವ್ಯವಸ್ಥೆ ಒದಗಿಸುವದು ಅಗತ್ಯವಿದೆ. ಪಡಿತರದರರಿಗೆ ತೊಂದರೆಯಾಗದoತೆ ಬೈಯೋಮೇಟ್ರಕ್ ಪದ್ದತಿ ಇಲ್ಲದೇ ರಜಿಸ್ಟರ್‍ದಲ್ಲಿ ಹೆಸರು ನಮೂದಿಸಿಕೊಂಡು ಎಪ್ರೀಲ್ ಮತ್ತು ಮೇ ತಿಂಗಳಿಗೆ ಆಗುವಷ್ಟು ಪಡಿತರ ದಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಪಟ್ಟಣದಲ್ಲಿ ಪುರಸಭೆಯವರು, ಗ್ರಾಮೀಣ ಪ್ರಧೇಶಗಳಲ್ಲಿ ಗ್ರಾ.ಪಂ ಅಧಿಕಾರಿಗಳು ಪ್ರತಿದಿನ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗ್ರತಿ ಮೂಡಿಸಬೇಕು. ಅನಾವಶ್ಯಕವಾಗಿ ಓಡಾಡುವ ಜನರನ್ನು ಪೋಲಿಸರು ನಿಯಂತ್ರಣ ಮಾಡಬೇಕು. ಹೊರಗಿನಿಂದ ಬಂದು ಗ್ರಾಮಗಳಲ್ಲಿ ವಾಸ ಮಾಡಿರುವ ಜನರ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಬೇಕು.
ಖಾಸಗಿ ದವಾಖಾನೆಯವರಿಗೆ ಮತ್ತು ಔಷಧಿ ಅಂಗಡಿಯವರಿಗೆ ಕಡ್ಡಾಯವಾಗಿ ಆಸ್ಪತ್ರೆ ಆರಂಭಿಸುವoತೆ ಒತ್ತಾಯ ಮಾಡಬೇಡಿ, ಅವರಲ್ಲಿ ಕೆಲವರಿಗೆ ಸಿಬ್ಬಂದಿಗಳ ಕೊರತೆ, ಅಗತ್ಯ ಸೌಲಭ್ಯಗಳ ಕೊರತೆ, ಮತ್ತು ಸುರಕ್ಷತಾ ಕಿಟ್‍ಗಳ ಕೊರತೆಯಿಂದ ಕೆಲವು ಸ್ವಯಂ ಪ್ರೇರಿತವಾಗಿ ತಮ್ಮ ಆಸ್ಪತ್ರೆಯ ಮೂಲಕವೇ ವೈರಾಣು ಹರಡಬಾರದು ಎಂದು ಕ್ಲಿನಿಕ್ ಬಂದ್ ಮಾಡಿದ್ದಾರೆ. ಅವರಿಗೆ ಒತ್ತಾಯ ಮಾಡಬೇಡಿ ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜನರಿಗೆ ಅಗತ್ಯವಿರುವ ದಿನಸಿ ವಸ್ತುಗಳನ್ನು ಅಂಗಡಿಕಾರರು ದುಬಾರಿ ಬೆಲೆಗೆ ಮಾರುತ್ತಿರುವ ದೂರುಗಳು ಬಂದಿವೆ. ಅಧಿಕಾರಿಗಳು ಎಲ್ಲ ಅಂಗಡಿಕಾರರಿಗೆ ಈ ಬಗ್ಗೆ ಸೂಚನೆ ನೀಡಬೇಕು. ದೂರುಗಳು ಬಂದಲ್ಲಿ ಕೇಸ್ ಹಾಕಿ ಅಂಗಡಿ ಸೀಜ್ ಮಾಡಬೇಕು.
ಹೆಸ್ಕಾಂ ಅಧಿಕಾರಿಗಳು ರೈತರಿಗೆ ಟಿ.ಸಿ ಕೊಡಲು ಹಣಕ್ಕಾಗಿ ಸತಾಯಿಸುತ್ತಿರುವ ದೂರುಗಳು ಬಂದಿವೆ, ಈಗ ಬೇಸಿಗೆ ಕಾಲ ಆರಂಭವಾಗಿದ್ದು, ವಿದ್ಯುತ್ ತೊಂದರೆಯಾದoತೆ ಅಗತ್ಯ ಸ್ಥಳಗಳಲ್ಲಿ ಟ್ರಾನ್ಸಪಾರ್ಮ ಒದಗಿಸಬೇಕು ಎಂದು ಶಾಖಾಧಿಕಾರಿ ಮಲಕಪ್ಪನ ಅವರಿಗೆ ಖಡಕ ಎಚ್ಚರಿಕೆ ನೀಡಿದರು.
ಕೃಷಿ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ:
ಅಥಣಿ ತಾಲೂಕಿನಲ್ಲಿ ರೈತರು ಈಗ ಬೆಳೆದ ಬೆಳೆಗಳ ರಾಶಿಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಬೆಳೆದಿರುವ, ದ್ರಾಕ್ಷಿ, ಮುಸಿಕಿನ ಜೋಳ, ರೇಷ್ಮೆ ಬೆಳೆಗಳಿಗೆ ಸಂಬoದಪಟ್ಟ ಅಧಿಕಾರಿಗಳು ಪ್ರತ್ಯೇಕ ಸಭೆ
ನಡೆಸಿ ರೈತರ ದಾಸ್ತಾನುಗಳ ಮಾರಾಟಕ್ಕೆ ಅಗತ್ಯ ಕ್ರಮ ಕೈಕೊಳ್ಳುವಂತೆ ಶಾಸಕ ಮಹೇಶ ಕುಮಠಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗನವರ ಮಾತನಾಡಿ ಕೊವಿಡ್-19 ಸೊಂಕು ಹರಡದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ ಮಟ್ಟದಲ್ಲಿ ಮತ್ತು ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಈ ವೇಳೆ ತಾ.ಪಂ ಅಧ್ಯಕ್ಷೆ ಕವಿತಾ ನಾಯಿಕ, ಯುವ ಧುರೀಣ ಚಿದಾನಂದ ಸವದಿ, ತಹಶೀಲ್ದಾರ ದುಂಡಪ್ಪ ಕೋಮಾರ, ತಾ.ಪಂ.ಅಧಿಕಾರಿ ರವಿಂದ್ರ ಬಂಗಾರೆಪ್ಪನವರ, ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ. ಆರೋಗ್ಯ ಅಧಿಕಾರಿ ಡಾ.ಕೊಪ್ಪದ, ಡಾ.ಚನ್ನಗೌಡ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ.ರಾಜೆದ್ರ ಬುರ್ಲಿ. ಬಸವರಾಜ ಯಾದವಾಡ. ಇನ್ನೀತರರು ಉಪಸ್ಥಿತರಿದ್ದರು.
ಹೆಸ್ಕಾಂ ಅಧಿಕಾರಿಗೆ ಶಾಸಕರಿಂದ ತರಾಟೆ:
ಅಥಣಿ ಇಲ್ಲಿನ ಹೆಸ್ಕಾಂ ಶಾಖಾಧಿಕಾರಿ ಮಲಕಪ್ಪನವರ ಯಾವುದೇ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದ ಕಾರಣ ಶಾಸಕ ಮಹೇಶ ಕುಮಠಳ್ಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ರೈತರ ಟಿ.ಸಿ.ಗಳನ್ನು 24 ಗಂಟೆಯಲ್ಲಿ ಕೊಡಬೇಕು ಎಂಬ ನಿಯಮ ಇದ್ದರೂ ಹಣದಾಸೆ 15 ದಿನ ಕಳೆದರೂ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕೆಟ್ಟ ಚಾಚಿಯನ್ನು ಬಿಟ್ಟು ರೈತ ವಿಷಯದಲ್ಲಿ ಸೇವಾಭಾವನೆ ಕಲಿಯಿರಿ, ಈಗ ಬೇಸಿಗೆ ಬಂದಿದೆ, ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು
Share
WhatsApp
Follow by Email