ಹುಚ್ಚುನಾಯಿ ದಾಳಿ: ನಾಯಿಮರಿಗಳಿಗೆ ಚಿಕಿತ್ಸೆ

ಬೈಲಹೊಂಗಲ : ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿದ್ದ ಬೀದಿನಾಯಿ ಹಾಗೂ ಎಂಟು ನಾಯಿ ಮರಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಕಾಜಗಾರ ಗಲ್ಲಿಯ ಬೀದಿನಾಯಿ ಹಾಗೂ ಎಂಟು ನಾಯಮರಿ ಮೇಲೆ ಹುಚ್ಚುನಾಯಿ ದಾಳಿ ಮಾಡಿತ್ತು. ನಾಯಿ ಹಾಗೂ ನಾಯಿಮರಿಗಳು ತೀವ್ರ ಗಾಯಗೊಂಡಿದ್ದವು. ಇದನ್ನು ಕಂಡ ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದರು. ಕೊರೊನಾ ಲಾಕ್‌ಡೌನ್ ನಡುವೆಯೂ ತಕ್ಷಣ ಸ್ಪಂದಿಸಿ ಹಿರಿಯ ಪರವೀಕ್ಷಕ ಎನ್.ಬಿ.ಮಡಿವಾಳರ, ಮಲ್ಲಿಕಾರ್ಜುನ ಕೊಡ್ಲಿವಾಡ ಆಗಮಿಸಿ ಚಿಕಿತ್ಸೆ ನೀಡಿದರು. ನಾಯಿ ಹಾಗೂ ನಾಯಿಮರಿಗಳು ಚೇತರಿಸಿಕೊಂಡಿವೆ.
ಬಾಕ್ಸ ಐಟಂ :
ಇತ್ತೀಚೆಗೆ ಹುಚ್ಚನಾಯಿ ದಾಳಿ ನಡೆಸಿ ಎಂಟು ಮರಿಗಳಿಗೆ ಜನ್ಮ ನೀಡಿದ ನಾಯಿಯೊಂದು ತೀವ್ರ ನರಳಾಡುತ್ತಿದ್ದದ್ದನ್ನು ಕಂಡು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವೈದ್ಯಾಧಿಕಾರಿಗಳು ಕಾಳಜಿ ವಹಿಸಿ ಉತ್ತಮ ಉಪಚಾರ ಮಾಡಿದ್ದಾರೆ. ಪಶು ವೈದ್ಯಕೀಯ ಹಿರಿಯ ಪರಿವೀಕ್ಷಕ ಎನ್.ಬಿ.ಮಡಿವಾಳರ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ ಕೊಡ್ಲಿವಾಡ ಚಿಕಿತ್ಸೆ ನೀಡಿದ್ದು, ಅವರ ಕಾರ್ಯ ಶ್ಲಾಘನೀಯ

Share
WhatsApp
Follow by Email