ಮೂಡಲಗಿ : ಗಾರ್ಡನ್ ಅಭಿವೃದ್ದಿ ಸಂಸ್ಥೆಯಿoದ ಮಾಸ್ಕ್ ವಿತರಣೆ

ಮೂಡಲಗಿ: ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸ ಬೇಕು. ಸರ್ಕಾರ ಜಾರಿಗೆ ಮಾಡಿರುವ ಕಾನೂನು ಉಲ್ಲಂಘಿಸದೇ ಸಮಾಜದ ಸ್ವಾಸ್ಥ ಕಾಪಡುವಂತೆ ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ತಿಳಿಸಿದರು.

ಅವರು ಪಟ್ಟಣದ ವಿದ್ಯಾನಗರದಲ್ಲಿ ಪುರಸಭೆ ಗುರುತಿಸಿರುವ ತರಕಾರಿ ಮಾರಾಟ ಸ್ಥಳದಲ್ಲಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಸಂಸ್ಥೆಯ ವತಿಯಿಂದ ಮಾಸ್ಕ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಜಾಗೃತಿವಹಿಸಿ ಎಂದರು.

ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸುತ್ತಿರುವ ಪೋಲಿಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪುರಸಭೆಯ ಪೌರ ಕಾರ್ಮಿಕರು, ಆಶಾಕಾರ್ಯಕರ್ತರಿಗೆ ಸಂಸ್ಥೆಯಿoದ ಮೂರು ದಿನ ತಂಪು ನೀರು, ಮಜ್ಜಿಗೆ, ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಪುರಸಭೆ ಸದಸ್ಯ ಶಿವಾನಂದ ಸಣ್ಣಕ್ಕಿ, ಸಂಸ್ಥೆಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಭಗವಂತ ಉಪ್ಪಾರ, ಭೀಮಶಿ ಸೋರಗಾಂವಿ ಮತ್ತಿತರರು ಇದ್ದರು

Share
WhatsApp
Follow by Email