
ಔಷಧಿ ಸಿಂಪಡಣೆ ಕಾರ್ಯಕ್ಕೆ ನಾವು ಅಗ್ನಿ ಶಾಮಕ ದಳದ ಸಹಯೋಗದೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿ spraying ಮಾಡಲು ಅಗ್ನಿಶಾಮಕ ಇಲಾಖೆಯ ಸಹಾಯ ಕೋರಿದ್ದೇವೆ.
ನಗರದ ಪ್ರಮುಖ ರಸ್ತೆಗಳಾದ ಸುಭಾಷ್ ರೋಡ, ಕಾರ್ಪೊರೇಷನ್ ಬ್ಯಾಂಕ್, ಗಾಂಧಿ ಚೌಕ್ ವರೆಗೆ ಔಷಧಿ ಸಿಂಪಡಣೆ ಕಾರ್ಯ ನಡೆಯಿತು.ಸಂಪೂರ್ಣ ನಗರದಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಿರಿಯ ಆರೋಗ್ಯ ನೀರಿಕ್ಷಕ ಪ್ರಕಾಶಗೌಡಾ ಪಾಟೀಲ, ನೀರಿನಲ್ಲಿ ಹೈಪೋಕ್ಲೋರೈಡ್ ಸೋಲ್ಯುಶನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಲು ಈ ರೀತಿ ಮಾಡಿದ್ದೇವೆ. ಇಂದಿನಿಂದ ಈ ಔಷಧವನ್ನು ನಗರದೆಲ್ಲೆಡೆ ಸಿಂಪಡಣೆ ಮಾಡುತ್ತೇವೆ ಎಂದರು.