
ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಆಪ್ತ ಕಾರ್ಯದರ್ಶಿ
ನಾಗಪ್ಪ ಶೇಖರಗೊಳ, ಸಿ ಪಿ ವೆಂಕಟೇಶ ಮೂರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆಗೆ
ಚಾಲನೆ ನೀಡಿದರು.
ಔಷಧಿ ಸಿಂಪಡಣೆ ಕಾರ್ಯಕ್ಕೆ ಗೋಕಾಕ ಅಗ್ನಿಶಾಮಕ ಠಾಣಾ ಅಧಿಕಾರಿ ಎ ಬಿ ನದಾಪ್, ಪ್ರಮುಖ ಅಗ್ನಿಶಾಮಕ ಚಾಲಕ ಎಮ್ ಎಮ್ ಕನಭಾಂವಿ, ಅಗ್ನಿಶಾಮಕರು ಆರ್ ಎಮ್ ಕಾಪಸಿ, ಎ ಬಿ ಮುಲ್ತಾನಿ, ಎಸ ಸಿ ಗುರಾಯಿ ಆರ್ ಎಸ್ ಹಳ್ಳಿಗೌಡರ. ಸಹಯೋಗದೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿ ಸ್ಪ್ರೇ ಮಾಡಲು ಪ್ರಾರಂಭ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೊಡ , ಹಾಗೂ ಕಿರಿಯ ಆರೋಗ್ಯ ನೀರಿಕ್ಷಕ ಪ್ರೀತಮ್ ಬೋವಿ ನೀರಿನಲ್ಲಿ ಹೈಪೋಕ್ಲೋರೈಡ್ ಸೋಲ್ಯುಶನ್ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ. ಕೇವಲ ಕೊರೋನಾ ಅಷ್ಟೇ ಅಲ್ಲಾ, ಬೇರೆ ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಲು ಈ ಕಾರ್ಯವನ್ನು ಮಾಡಲಾಗಿದೆ, ಇಂದಿನಿಂದ ಈ ಔಷಧವನ್ನು ನಗರದೆಲ್ಲೆಡೆ ಸಿಂಪಡಣೆ ಮಾಡುತ್ತೇವೆ ಎಂದರು.
ಮೂಡಲಗಿಯ ಪುರಸಭೆ ಮಾಜಿ ಸದಸ್ಯರಾದ ಮರೆಪ್ಪ ಮರೆಪ್ಪಗೋಳ ಹಾಗೂ ಹಾಲಿ ಸದಸ್ಯರಗಳಾದ ರಮೇಶ್ ಸಣ್ಣಕ್ಕಿ, ಶಿವು ಚಂಡಕಿ, ರವೀಂದ್ರ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಅನ್ವರ್ ನದಾಪ್, ಸಿದ್ದು ಗಡ್ಡೆಕರ, ಬಸು ಝೇಡೆಕುರಬರ, ಪ್ರಕಾಶ ಮುಗಳಖೋಡ, ಹಾಗೂ ಹುಸೇನ್ ಶೇಖ, ಇಬ್ರಾಹಿಂ ಹುಣಶ್ಯಾಳ, ಮತ್ತು ಸ್ಥಳಿಯ ಸಮಾಜ ಸೇವಕ ಈರಪ್ಪ ಡವಳೇಶ್ವರ.
ಮೂಡಲಗಿ ಪುರಸಭೆಯ ಸಂಬಂಧಿಸಿ ಹಾಗೂ ಪೌರ ಕಾರ್ಮಿಕರು ಇದರು.