
ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಸಮಾಜದ ಸ್ವಾಸ್ಥ್ಯ ಕಾಯುವ ನಿಟ್ಟಿನಲ್ಲಿ ಮತ್ತು ಸರ್ವಜನಿಕ ಹಿತಾಸಕ್ತಿಗಾಗಿ ದುಡಿಯುವ ರ್ಗಕ್ಕೆ ಸೇರಿದ ಪುರಸಭೆ ಕರ್ಮಿಕರ ಹಿತ ಕಾಯುವದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.ನಿತ್ಯವೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯವಂತರಾಗಿರಬೇಕು ಆದ್ದರಿಂದ ಅವರಿಗೆ ಇಂದು ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಗಿದೆ. ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ನಮ್ಮ ದೇಶದಲ್ಲಿ ಹರಡದಂತೆ ಮತ್ತು ಹೆಚ್ಚಿನ ಸಾವುನೊವುಗಳಾಗದಂತೆ ತಡೆಯಲು ಜನರು ಮನೆಯಲ್ಲಿ ಉಳಿಯುವ ಮೂಲಕ ಸಹಕರಿಸಬೇಕು ಎಂದು ಸರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕವಲಾಪೂರ, ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಬೋಳಿಶೆಟ್ಟಿ,ವಿಶಾಲ ಮಂಗಸೂಳಿ, ಮನೋಹರ ಹಂಜಿ,ಮತ್ತು ಸಮಾಜ ಸೇವಕ ದೀಪಕ ಶಿಂಧೆ,ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.