ಮುಗಳಖೋಡ: ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ ೧೪ ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಮ್ಮುಖದಲ್ಲಿ ಹಾಗೂ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ಈ ಕೋರೊನ ವೈರಾಣು ಬರಬಾರದೆಂದು ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತ್ತೆ ಮುಂಜಾಗೃತ ಕ್ರಮವಾಗಿ ಪಟ್ಟಣದ ಬಜಾರ್, ರೇಣುಕಾಚಾರ್ಯ ನಗರ, ಜೈ ನಗರ, ಆದರ್ಶ ನಗರ, ಸರ್ಕಲ್ ಸೇರಿದಂತ್ತೆ ಪಟ್ಟಣದ ವಿವಿದ ನಗರಗಳಲ್ಲಿ ಈ ರಾಸಾಯನಿಕ ಕೀಟನಾಶಕ ಔಷಧಿಯನ್ನು ಸಿಂಪಡಿಸಲಾಯಿತು. ಈ ಸಂದರ್ಬದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ್, ಪುರಸಭೆ ಸದಸ್ಯರಾದ ಸದಾಶಿವ ಕರೆಪ್ಪಗೋಳ, ಆನಂದ ಗಂಧ, ಪಟ್ಟಣದ ನಿವಾಸಿಗಳಾದ ಶಂಕರ ಕೋಳಿ, ಸುಭಾಸ ಹೋಸಮಣಿ, ನೇಹಲ್ ಸನ್ನ್ನಾಯಿಕ, ಅಮೀತ್ ಪರೀಟ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಉಪಸ್ಥಿತರಿದ್ದರು.