
ಜರ್ಬೇರಿ ಹೂವು ಬೆಳೆದಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ರೈತನ ಕಟುಂಬ ಸದ್ಯ ಕೊರೊನಾ ಲಾಕ್ ಡೌನ ನಿಂದ ಕಣ್ಣೀರು ಹಾಕುವಂತಾಗಿದೆ.

ನಿತ್ಯವೂ ಐವತ್ತು ಸಾವಿರದಷ್ಟು ಆದಾಯ ಕೊಡುತ್ತಿದ್ದ ಹೂವು ಈಗ ರಪ್ತಾಗದೆ ಬಾಡಿ ಹೋಗುವ ಹೂವು ಮತ್ತು ಕೂಲಿ ಕಾರ್ಮಿಕರ ಖರ್ಚು ಮತ್ತು ಪ್ಯಾಕಿಂಗ್ ವೆಚ್ಚ ಕಳೆದು ಇಪ್ಪತ್ತು ಸಾವಿರದಷ್ಟು ಉಳಿಕೆ ಆಗುತ್ತಿದ್ದ ಅನ್ನದಾತ ಸದ್ಯ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಕೃಷ್ಣಾ ನದಿ ಪ್ರವಾಹ ಬಂದು ಎರಡು ಎಕರೆ ಹೂವು ನಷ್ಟವಾದರೆ ಈ ಬಾರಿ ಕೈಗೆ ಬಂದ ತುತ್ತು ಸದ್ಯ ಬಾಯಿಗೆ ಬರದಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ.ಸರ್ಕಾರ ಏನಾದರೂ ಸಹಾಯ ಮಾಡುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದು ಕೂಡಲೇ ಸರ್ಕಾರ ಹೂವು ಬೆಳೆದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.