ರಬಕವಿ-ಬನಹಟ್ಟಿ: ಬನಹಟ್ಟಿ ನಗರದ ವಾರ್ಡ ನಂ. 9 ರ ಗಾಂಧಿನಗರ, ಭಜಂತ್ರಿ ಓಣಿ ಹಾಗೂ ಆಯ್.ಬಿ.ಹತ್ತಿರದ ನಿವಾಸಿಗಳಿಗೆ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಕಾಯಿಪಲ್ಯೆ ವಿತರಣೆ ಮಾಡಿದರು. ರಬಕವಿ-ಬನಹಟ್ಟಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪಣ್ಣ ಉಳ್ಳಾಗಡ್ಡಿ, ನಗರಸಭಾ ಸದಸ್ಯ ಶಿವಾನಂದ ಬುದ್ನಿ, ಕುಮಾರ ಪೋರೆ, ಸಿದ್ದಪ್ಪ ಪಾಟೀಲ, ರವಿ ಗುಣಕಿ ಅನೇಕರಿದ್ದರು.