ಮುಗಳಖೋಡ: ಪಟ್ಟಣದಲ್ಲಿ ಶ್ರೀ ಹನುಮಾನ ದೇವರ ಓಕಳಿ ಉತ್ಸವ ಔಪಚಾರಿಕವಾಗಿ, ಶಾಂತಿಯುತವಾಗಿ ಸೋಮವಾರ sಸಾಮಾಜಿಕ ಅಂತರದೊ0ದಿಗೆ ನೆರವೇರಿತು. ಬೆಳಿಗ್ಗೆ ಹನುಮಾನÀ ದೇವರಿಗೆ ಅರ್ಚಕರಿಂದ ಮಜ್ಜನ, ಎಲಿಪೂಜೆ, ಅಭಿಷೇಕದೊಂದಿಗೆ ಪೂಜೆ ಪ್ರಾರಂಭಿಸಿ, ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ನೆರವೇರಿಸಿ. ಸಾಯಂಕಾಲ 5 ಗಂಟೆಗೆ ಕೊಂಡ ಪೂಜೆ ಮಾಡಿ ಪಲ್ಲಕ್ಕಿ ಉತ್ಸವದೊಂದಿಗೆ ಓಕಳಿ ಉತ್ಸವ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ರಾಜುಗೌಡ ನಾಯಿಕ, ಕೃಷ್ಣಾ ನಾಯಿಕ, ಶಿವಬಸು ಕಾಪಸಿ, ಉದಯಕುಮಾರ ನಾಯಿಕ, ಸೂರ್ಯಕಾಂತ ನಾಯಿಕ, ಹಣಮಂತ ಶೇಗುಣಸಿ, ಭಗವಂತ ಗುಮಟಿ, ಚಂದ್ರಕಾAತ ನಾಯಿಕ, ಅಪ್ಪಾಸಾಹೇಬ ನಾಯಿಕ, ವಿಠ್ಠಲ ಪೂಜೇರಿ, ದಿಲೀಪ ನಾಯಿಕ, ರಾಜು ಹೊಸಪೇಟಿ ಇದ್ದರು.