![](http://kannadatoday.in/wp-content/uploads/2020/04/1384862415d4c6754bd3856aeda0fe1f4a00046fd647ee5a192234b04c48b2d77ea9e98af-6.jpg)
ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕತ್ನ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರ ಮನೆಯವರ 22 ವರ್ಷದ ಗಂಡು ಹಾಗೂ 40 ವರ್ಷದ ಮಹಿಳೆಗೆ ಕೊರೋನೊ ವೈರಸ್ ಪಾಸಿಟಿವ್ ಬಂದಿದೆ.
ಕೊರೋನೊ ಸೋಕಿತರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಗನಿಗೆ ತಾಯಿಯಿಂದ ಸೋಂಕು ತಗುಲಿದ್ದರೆ ಇನ್ನೊಬ್ಬ ಮಹಿಳೆಗೆ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರ ಭೇಟಿಯಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಬೆಳಗಾವಿ ಜಿಲ್ಲೆಯಾದ್ಯಂತೆ ಜಿಲ್ಲಾಡಳಿತ ಹೈಅಲರ್ಟ ಘೋಷಣೆ ಮಾಡಿದ್ದು ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಸಂದೇಶ ರವಾನಿಸಿದೆ.