ನಿರಂತರ ಕಾರ್ಯನಿರ್ವಹಿಸುತ್ತಿರುವ ರಾಯಬಾಗ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ

ರಾಯಬಾಗ : ಕೊರೊನಾ, ಕೊರೊನಾ ಮಹಾಮಾರಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ, ಎಲ್ಲಿ ಹೋದರು ಎಲ್ಲೆ ಇದ್ದರು ಎಲ್ಲರೂ ಬಾಯಲ್ಲೂ ಕೊರೊನಾದೇ ಚರ್ಚೆ ಅದೇ ಮಾತು ಅದೇ ಕಥೆ, ಇನ್ನು ಕೆಲ ಅಧಿಕಾರಿಗಳಂತು ಸರಕಾರದ ಆದೇಶದಂತೆ ಹಗಲು ರಾತ್ರಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ಕಟ್ಟು ನಿಟ್ಟಾಗಿ ಪಾಲಿಸುವುದು ಮತ್ತು ಜನರು ಹೊರಗಡೆ ಬರದಂತೆ ಕಾಳಜೀವಜಿಸುವುದು. ಬೇರೆ ಊರಿನವನರು ಪಟ್ಟಣಕ್ಕೆ ಬಂದರೇ ಅವರನ್ನು ಕೂಡಲೇ ವೈದ್ಯಕೀಯ ತಪಾಸಣೆ ಮಾಡಿಸುವುದು ಸೇರಿದಂತೆ ಎಲ್ಲಾ ಕೆಲಸದಲ್ಲಿ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಇಲ್ಲೊಬ್ಬರು ಅಧಿಕಾರಿಗಳು ಅವರೇ ರಾಯಬಾಗ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು.
ಹೌದು ರಾಯಬಾಗ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರೇ ಪಟ್ಟಣದ ಎಲ್ಲರ ಮೆಚ್ಚುಗೆಯ ಕಾರ್ಯಕ್ಕೆ ಪಾತ್ರರಾಗಿದ್ದಾರೆ.
ಕೊರೊನಾ ವೈರಸ್ ಪರಿಣಾಮ ಲಾಕ್‌ಡೌನ್‌ವಾದಾಗಿನಿಂದಲೂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರು ಮೊದಲು ಪಟ್ಟಣದ ಜನರಿಗೆ ಕೊರೋನಾ ಮಹಾಮಾರಿಯ ರೋಗದ ಬಗ್ಗೆ ಪಟ್ಟಣದ ಮುಖ್ಯ ರಸ್ತೆಯಮೇಲೆ ಬರಹ ಬರೆಯಿಸಿ, ಜನರಿಗೆ ಕರಪತ್ರ ನೀಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಪ್ರತಿದಿನ ಹಗಲು-ರಾತ್ರಿ ಎನ್ನದೆ ನಿರಂತರ ಕೆಲಸ ನಿರ್ವಹಿಸಿ ಪಟ್ಟಣದಲ್ಲಿ ಯಾವುದೇ ರೀತಿ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿ ಜನರ ಅಚ್ಚುಮೆಚ್ಚಿನ ಅಧಿಕಾರಿಗಳಾಗಿದ್ದಾರೆ.
ಲಾಕ್‌ಡೌನ್ ಮಧ್ಯೆದಲ್ಲಿಯೂ ಕೂಡಾ ಒಂದು ವೇಳೆ ಅಲ್ಲಲ್ಲಿ ಜನ ಸೇರಿದ್ದು ಗೊತ್ತಾಯಿತು ಅಂದರೆ ಇವರೇ ಒಂದು ಲಾಠಿ ಹಿಡಿದುಕೊಂಡು ಜನರನ್ನು ಚದುರಿಸಿ, ಜನರು ಒಟ್ಟಿಗೆ ಸೇರದಂತೆ ಮತ್ತು ಮನೆ ಬಿಟ್ಟು ಹೊರಗಡೆ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ರಾಯಬಾಗ ಪಟ್ಟಣಕ್ಕೆ ಯಾರೇ ಕೂಡಾ ಬೇರೆ ಕಡೆಯಿಂದ ಬಂದಿರುವ ಬಗ್ಗೆ ಮಾಹಿತಿ ಬಂದರೆ ಸಾಕು ಕೂಡಲೇ ಅವರ ಮನೆಗೆ ಹೋಗಿ ಆರೋಗ್ಯ ಇಲಾಖೆಯವರನ್ನು ಕರೆದುಕೊಂಡು ಹೋಗಿ ಅವರ ಆರೋಗ್ಯ ತಪಾಸಣೆ ಮಾಡಿಸಿ ಸಂಶಯ ಬಂದ ವ್ಯಕ್ತಿಗಳನ್ನು ಕೂಡಲೇ ಅಂತಹವರನ್ನು ಹೊಂ ಕ್ವಾರಂಟೈನ್‌ದಲ್ಲಿ ಇಡುವ ವ್ಯವಸ್ಥೆ ಮಾಡಿಸುತ್ತಿದ್ದಾರೆ.
ಇನ್ನು ಪಟ್ಟಣದ ಬ್ಯಾಂಕ್ ಮುಂದೆ ಜನ ಜಂಗಳು ಸೇರಿದರೂ ಕೂಡ ಹೋಗಿ ಜನರನ್ನು ನಿಯಂತ್ರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕಿನ ಒಳಗಡೆ ಸರದಿ ಸಾಲಿನಂತೆ ನಿಂತು ಹೋಗುವಂತೆ ತಿಳಿಹೇಳುತ್ತಾರೆ. ಅಲ್ಲದೇ ಪಟ್ಟಣದಲ್ಲಿ ಫಾಂಗೀಗ್ ಹಾಗೂ ದ್ರಾವಣವನ್ನು ಸಿಂಪಡಿಸಿ ನಗರವನ್ನು ರೋಗ ರುಜೀಗಳು ಹರಡಂತೆ ಎಚ್ಚರವಹಿಸಿ ದಿನಪ್ರತಿ ಬೆಳೆಗ್ಗೆಯಿಂದ ಸಾಂಯಕಾಲದವರೆಗೂ ನಿರಂತರ ಶ್ರಮವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಾ ಇಂತಹ ಪರಿಸ್ಥಿತಯಲ್ಲಿ ಹಿಂಗೂ ಕೆಲಸ ಮಾಡಬಹುದೆಂದು ತೋರಿಸಿಕೊಟ್ಟ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರ ಒಂದು ಕಾರ್ಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಾಕಷ್ಟು ಜನರಿಗೆ ಕೊರೋನಾ ಪಾಸಿಟೀವ್ ವರದಿ ಬಂದಿವೇ ಆದರೆ ರಾಯಬಾಗ ಪಟ್ಟಣದಲ್ಲಿ ಇಲ್ಲಿಯವರೇಗೆ ಯಾವುದೋ ಒಂದು ಕೊರೋನಾ ಪಾಸಿಟಿವ್ ಬಂದಿಲ್ಲವಲ್ಲ ಅದೇ ನಮ್ಮ ಪುಣ್ಯ ಎನ್ನುತ್ತಾರೆ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಅವರು ಸಂತೋಷ ವ್ಯಕ್ತಪಡಿಸುತ್ತಾರೆ.
Share
WhatsApp
Follow by Email