ರಾಯಬಾಗ :ಕಡುಬಡವರಿಗೆ ಹಾಗೂ ವಿಧವಾ ಹೆಣ್ಣುಮಕ್ಕಳಿಗೆ ಆಹಾರ ಸಾಮಾಗ್ರಿಗಳ ಕೀಟ್‌ ವಿತರಣೆ

ರಾಯಬಾಗ : ಕೊರೋನಾದಿಂದ ಲಾಕಡೌನ್ ಹಿನ್ನಲೆಯಲ್ಲಿ ಪಟ್ಟಣದಲ್ಲಿರುವ ಅತೀ ತೊಂದರೆಗಿಡಾದ ಕಡುಬಡವರಿಗೆ ಹಾಗೂ ವಿಧವಾ ಹೆಣ್ಣುಮಕ್ಕಳಿಗೆ ಉದ್ಯಮಿ ಹಾಗೂ ಸಮಾಜ ಸೇವಕ ಸದಾಶಿವ ದೇಶಿಂಗೆ ಅವರು ರಾಯಣ್ಣಾ ಗೋ-ಗ್ರೀನ್ ಫೌಂಡೇಶನದ ವತಿಯಿಂದ ಜೀವನಾವಶ್ಯಕ ಆಹಾರ ಸಾಮಾಗ್ರಿಗಳ ಕೀಟ್‌ಗಳನ್ನು ವಿತರಿಸಿ ಮಾನವಿಯತೆ ಮೆರೆದರು.
ಕೀಟ್‌ಗಳನ್ನು ವಿತರಿಸಿ ಉದ್ಯಮಿ ಸದಾಶಿವ ದೇಶಿಂಗೆ ಅವರು ಮಾತನಾಡಿ ಕೊರೋನಾ ಪರಿಣಾಮದಿಂದ ನಮ್ಮ ಫಾಲ್ಟಿç ಉದ್ಯಮದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿಗಳಷ್ಟು ನಷ್ಟ ಸಂಭAವಿಸಿದೆ, ಆದರೆ ರಾಯಬಾಗ ಪಟ್ಟಣದಲ್ಲಿರುವ ಕೆಲವರು ಬಡ ಮತ್ತು ವಿಧವೆ ಹೆಣ್ಣುಮಕ್ಕಳು ಲಾಕ್‌ಡೌನ್‌ದಿಂದ ಒಂದು ಹೊತ್ತು ಊಟಕ್ಕೂ ಕೂಡಾ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು ಈ ಹಿನ್ನಲೆಯಲ್ಲಿ ನಾವು ಅವರ ಒಂದು ನೋವಿಗೆ ಸ್ಪಂಧಿಸಿ ಅವರಿಗೆ ಜೀವನಾವಶ್ಯಕ ವಸ್ತುಗಗಳ ಆಹಾರ ಸಾಮಗ್ರಿಗಳ ಕೀಟ್‌ಗಳನ್ನು ವಿತರಿಸಿ ಅವರಿಗೆ ಆತ್ಮ ಸ್ಥೆರ್ಯ ತುಂಬಿದ್ದೇವೆAದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಸದಾಶಿವ ದೇಶಿಂಗೆ, ನ್ಯಾಯವಾಧಿಗಳಾದ ಪ್ರಶಾಂತ ಒಡೆಯರ, ಡಿ.ಬಿ.ಪೂಜಾರಿ, ಆರ್.ಎಸ್.ಬುಗಡಿಕಟ್ಟಿ, ಅಪ್ಪಾಸಾಬ ಘೇನಾನಿ, ಧರೇಪ್ಪ ಘೇನಾನೀ ಸೇರಿದಂತೆ ಅನೇಕರು ಇದ್ದರು.
Share
WhatsApp
Follow by Email