KSRTC ಟಿಕೇಟ್ ದರ ಹೆಚ್ಚಳ ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ !

KSRTC ಟಿಕೇಟ್ ದರ ಹೆಚ್ಚಳ ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ !

ಜನವರಿ 5, ಭಾನುವಾರ ಬೆಳಗ್ಗೆಯಿಂದಲೇ KSRTC ಟಿಕೆಟ್ ದರ ಹೆಚ್ಚಳ ರಾಜ್ಯಾದ್ಯಂತ ಜಾರಿಯಾಗಿದೆ. ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

Karnataka Transport Minister Ramalinga Reddy

ರಾಜ್ಯ ಸರ್ಕಾರಕ್ಕೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡೋಕೆ ಇಷ್ಟ ಇರಲಿಲ್ಲ. ಪ್ರತಿನಿತ್ಯ ವೆಚ್ಚ ಜಾಸ್ತಿ ಆಗುತ್ತಾ ಇತ್ತು. ಇಷ್ಟ ಕಷ್ಟದಲ್ಲಿ ಹೊಸ ಬಸ್ ಕೊಟ್ಟಿದ್ದೀವಿ. 1000 ನೇಮಕಾತಿ ಮಾಡಿದ್ದೀವಿ. ಹೊಸ ನಿಯಮಗಳನ್ನು ಆರೋಗ್ಯ ವಿಮೆ ಮಾಡುತ್ತಾ ಇದ್ದೀವಿ ಎಂದರು.

ಬಿಜೆಪಿಯವರು ಸಾಲ ಮಾಡಿ ಬಿಟ್ಟು ಹೋಗಿದ್ದರು. ಬಿಜೆಪಿ ಮಹಿಳಾ ವಿರೋಧಿಗಳು. ಶಕ್ತಿ ಯೋಜನೆ ನಿಲ್ಲಿಸಬೇಕು ಅಂತ ಅಪಪ್ರಚಾರ ಮಾಡುತ್ತಾ ಇದ್ದಾರೆ. ನಾವು 2028ರಲ್ಲಿ ಮತ್ತೆ ನಮ್ಮ ಸರ್ಕಾರ ಬರುತ್ತೆ. 2030ರವರೆಗೆ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತೆ ಎಂದಿದ್ದಾರೆ.

ನಾಳೆ ಸಾರಿಗೆ ಇಲಾಖೆ ಅಧಿಕೃತವಾಗಿ ದರ ಏರಿಕೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ನ ಸದ್ಯದ ಟಿಕೆಟ್ ದರ ಮತ್ತು 15% ರಷ್ಟು ಹೆಚ್ಚಳ ನಂತರದ ದರ ಎಷ್ಟಾಗಬಹುದು ಅನ್ನೋದು ಅಂದಾಜು ಪಟ್ಟಿ ಇಲ್ಲಿದೆ.

ಬಸ್ ಪ್ರಯಾಣ ದರ ಎಲ್ಲಿಗೆ ಎಷ್ಟು ಹೆಚ್ಚಳ ? ಮಾಹಿತಿ ಇಲ್ಲಿದೆ ;

ಬೆಂಗಳೂರು To ಮೈಸೂರು
146 ರೂಪಾಯಿ ದರ ಹೆಚ್ಚಳದ ನಂತರ – ಅಂದಾಜು 168 ರೂಪಾಯಿ

ಬೆಂಗಳೂರು To ಮಂಗಳೂರು
400 ರೂಪಾಯಿ ಹೆಚ್ಚಳದ ನಂತರದ ದರ – ಅಂದಾಜು 460 ರೂಪಾಯಿ

ಬೆಂಗಳೂರು To ಧರ್ಮಸ್ಥಳ
342 ರೂಪಾಯಿ ಹೆಚ್ವಳದ ನಂತರದ ದರ – ಅಂದಾಜು 393 ರೂಪಾಯಿ

ಬೆಂಗಳೂರು To ತುಮಕೂರು
80 ರೂಪಾಯಿ ಹೆಚ್ಚಳದ ನಂತರ – 92 ರೂಪಾಯಿ

ಬೆಂಗಳೂರು To ಚಿಕ್ಕಬಳ್ಳಾಪುರ
72 ರೂಪಾಯಿ ಹೆಚ್ಚಳದ ನಂತರ – ಅಂದಾಜು 83 ರೂಪಾಯಿ

ಬೆಂಗಳೂರು To ಚಿಕ್ಕಮಗಳೂರು
285 ರೂಪಾಯಿ ದರ ಏರಿಕೆ ನಂತರದ ದರ-328 ರೂಪಾಯಿ

ಬೆಂಗಳೂರು To ಹಾಸನ
246 ರೂಪಾಯಿ ಹೆಚ್ಚಳದ ನಂತರ – ಅಂದಾಜು 283 ರೂಪಾಯಿ

ಬೆಂಗಳೂರು To ರಾಯಚೂರು
556 ರೂಪಾಯಿ ಹೆಚ್ಚಳದ ನಂತರದ ದರ- 640 ರೂಪಾಯಿ

ಬೆಂಗಳೂರು To ಬಳ್ಳಾರಿ
376 ರೂಪಾಯಿ ಹೆಚ್ಚಳದ ನಂತರ – ಅಂದಾಜು 433 ರೂಪಾಯಿ

Share
WhatsApp
Follow by Email