15 ಸಾವಿರ ಶಿಕ್ಷಕ ಹುದ್ದೆ ಪೈಕಿ 3000 ಖಾಲಿ : ಈ ಹುದ್ದೆಗಳಿಗೆ ಮತ್ತೆ ನೇಮಕ ಪ್ರಕ್ರಿಯೆ ನಡೆಯಲಿದೆ.

15 ಸಾವಿರ ಶಿಕ್ಷಕ ಹುದ್ದೆ ಪೈಕಿ 3000 ಖಾಲಿ : ಈ ಹುದ್ದೆಗಳಿಗೆ ಮತ್ತೆ ನೇಮಕ ಪ್ರಕ್ರಿಯೆ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು GPSTR 2022 ಸಿಇಟಿ ಇಂದ ಖಾಲಿ ಉಳಿಯುವ 3000 ಶಿಕ್ಷಕರ ಹುದ್ದೆಗೆ ಮತ್ತೆ ಮುಂದಿನ ಫೆಬ್ರುವರಿ ತಿಂಗಳಲ್ಲಿ ಸಿಇಟಿ ನಡೆಸಲು ಮುಂದಾಗಿದೆ. ಇದರಿಂದ ಸರ್ಕಾರಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್ ಸಿಕ್ಕಿದಂತಾಗಿದೆ.

15,000 ಪದವೀಧರ ಪ್ರಾಥಮಿಕ ಶಾಲಾ (6-8th) ಶಿಕ್ಷಕರ ನೇಮಕಾತಿಯಲ್ಲಿ ನೀವು ಆಯ್ಕೆಯಾಗಲ್ಲ ಅಂತಾ ಕೊರಗುತ್ತಿದ್ದೀರಾ.?

ಚಿಂತೆ ಬೇಡ ನಿಮಗಾಗಿಯೇ ಇಲ್ಲಿದೆ ಇನ್ನೊಂದು ಛಾನ್ಸ್.

15,000 ಹುದ್ದೆಗಳಲ್ಲಿ ಇನ್ನೂ 3,000ಕ್ಕೂ ಅಧಿಕ ಹುದ್ದೆಗಳಿಗವೆ

ನವೆಂಬರ್ ನಲ್ಲಿ ಮತ್ತೊಂದು TET ಹಾಗೂ 2023 ಪೆಬ್ರವರಿ ಯಲ್ಲಿ ಮತ್ತೊಂದು CET ನಡೆಸಲು ಸರಕಾರ ನಿರ್ಧಾರ.

ಸರ್ಕಾರಿ ಶಿಕ್ಷಕರಾಗಬೇಕು ಎಂದುಕೊಂಡವರಿಗೆ ಶಿಕ್ಷಣ ಇಲಾಖೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ. 15 ಸಾವಿರ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೇ ತಿಂಗಳಲ್ಲಿ ನಡೆದ ಸಿಇಟಿ ಮೂಲಕ 54,342 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಆದರೆ ವಿಷಯವಾರು, ಜಿಲ್ಲಾವಾರು, ಮೀಸಲಾತಿವಾರು ವಿಂಗಡಣೆ ಮಾಡಿದಾಗ ಇನ್ನು ಸುಮಾರು 3000 ದಷ್ಟು ಹುದ್ದೆಗಳು ಖಾಲಿ ಉಳಿಯುವ ಸಾಧ್ಯತೆ ಇದೆ. ಆದ್ದರಿಂದ ಈ ಹುದ್ದೆಗಳಿಗೆ ಶಿಕ್ಷಣ ಇಲಾಖೆ ಮತ್ತೆ 2023 ರ ಫೆಬ್ರುವರಿಯಲ್ಲಿ ಸಿಇಟಿ ನಡೆಸಲು ಮುಂದಾಗಿದೆ.

ಇದರಿಂದ ಪ್ರಸ್ತುತ ಬೆರಳೆಣಿಕೆ ಅಂಕಗಳಲ್ಲಿ ಅರ್ಹತೆ ಪಡೆಯುವುದರಿಂದ ಮಿಸ್‌ ಮಾಡಿಕೊಂಡ ಅಭ್ಯರ್ಥಿಗಳು ಮತ್ತೆ ಅವಕಾಶ ಪಡೆಯಲಿದ್ದಾರೆ. ಅಲ್ಲದೇ ಮುಂದಿನ ನವೆಂಬರ್‌ ನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುವುದರಿಂದ, ಇದರಲ್ಲಿ ಅರ್ಹತೆ ಪಡೆಯುವ ಹೊಸ ಅಭ್ಯರ್ಥಿಗಳಿಗೂ ಸರ್ಕಾರಿ ಹುದ್ದೆ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ. ಅಲ್ಲದೇ 15 ಸಾವಿರ ಹುದ್ದೆಗಳಿಗೆ ಟಿಇಟಿ ಅರ್ಹತೆ ಇಲ್ಲದ ಕಾರಣ ಅರ್ಜಿ ಸಲ್ಲಿಸಲು ಆಗದವರು ಈಗ ಚೆನ್ನಾಗಿ ಓದಿಕೊಂಡು ಟಿಇಟಿ ಪಾಸ್‌ ಮಾಡಿ ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ವರ್ಷಕ್ಕೆ ಎರಡು ಬಾರಿ ಟಿಇಟಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವರ್ಷಕ್ಕೆ ಎರಡು ಬಾರಿ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ. ಆದ್ದರಿಂದ ಮುಂದಿನ ನವೆಂಬರ್‌ನಲ್ಲಿ ಟಿಇಟಿ ನಡೆಯಲಿದೆ.

3000 ಖಾಲಿ ಹುದ್ದೆಗಳು ಹೇಗೆ?

ಕರ್ನಾಟಕದಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು ಮತ್ತು ಅರ್ಹತೆ ಪಟ್ಟಿ ನೋಡಿದರೆ, ಅನುಪಾತದಲ್ಲಿ 1:4 ಅರ್ಹರಿದ್ದಾರೆ. ಆದರೆ, ಜಿಲ್ಲಾವಾರು ನೋಡಿದಾಗ ಕೆಲವು ವಿಷಯಗಳಲ್ಲಿ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಿಂತ ಕಡಿಮೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿದ್ದಾರೆ. ಇನ್ನೂ ಇದರಲ್ಲಿ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಹೈದೆರಾಬಾದ್ ಕರ್ನಾಟಕ ಭಾಗದ ಮೀಸಲಾತಿ ಮಾಹಿತಿಗಳನ್ನು ಗಮನಿಸಿದರೆ, ಕಡಿಮೆ ಅರ್ಹ ಅಭ್ಯರ್ಥಿಗಳು ಇದ್ದಾರೆ. ಸಮಾಜ ಅಧ್ಯಯನ, ಉರ್ದು ವಿಭಾಗದಲ್ಲಿ 261 ಹುದ್ದೆಗಳು ಖಾಲಿ ಇದ್ದರೆ, 804 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಆದರೆ ಇದನ್ನು ಜಿಲ್ಲಾವಾರು ಪಟ್ಟಿ ನೋಡಿದಾಗ, ಬೆಂಗಳೂರು ಗ್ರಾಮೀಣ ಭಾಗದಲ್ಲಿ 5 ಹುದ್ದೆ ಖಾಲಿ ಇದ್ದರೆ, ಅರ್ಹ ಅಭ್ಯರ್ಥಿಗಳು ಮೂರು ಮಂದಿ ಇದ್ದಾರೆ.ಕಲಬುರಗಿಯಲ್ಲಿ 32 ಹುದ್ದೆ ಇದ್ದರೆ, ಕೇವಲ 16 ಅರ್ಹರಿದ್ದಾರೆ. ಇದು ಜಿಲ್ಲಾವಾರು ಮಾಹಿತಿಯಾಗಿದ್ದು, ಇನ್ನು ಮೀಸಲಾತಿ, ವಿಷಯವಾರು ನೋಡಿದರೆ, ಇದರ ಪ್ರಮಾಣ ಹೆಚ್ಚಾಗಲಿದೆ.

ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಹಾಲಿ ನೇಮಕಾತಿ ಪ್ರಕ್ರಿಯೆಯಲ್ಲಿ ದಾಖಲಾತಿ ಪರಿಶೀಲನೆ ನಡೆಯಬೇಕಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಲಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಿ ಸೆಪ್ಟೆಂಬರ್ ಅಂತ್ಯದೊಳಗೆ ಮುಕ್ತಾಯ ಮಾಡಲು ಉದ್ದೇಶಿಸಲಾಗಿದೆ.

Share
WhatsApp
Follow by Email