ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪನಾಗ್ ಗಂಭೀರ ಆರೋಪ

ಮೈಸೂರು,ಜೂ.4:- ಎಲ್ಲವನ್ನು ಎಲ್ಲರನ್ನೂ ಸಮನಾಗಿ ನೋಡಬೇಕು ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ  ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್  ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು  ರೋಹಿಣಿ ಸಿಂಧೂರಿ ವಿರುದ್ಧ  ಮತ್ತೆ ಆಕ್ರೋಶ ಹೊರ ಹಾಕಿದರು.

ಸುತ್ತೂರು ಮಠಕ್ಕಿಂದು ಕಾರ್ಯಕ್ರಮ ನಿಮಿತ್ತ ತೆರಳಿದ್ದ    ಶಿಲ್ಪಾನಾಗ್ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಬಳಿಕ ಮಾತನಾಡಿ ಯಾರಿಗೂ ಸಹ ತಾನು ಮಾಡಿದ್ದೇ ಸರಿ ಎಂಬ ಭಾವನೆ ಬೇಡ. ಒಬ್ಬರ ಅಹಂಕಾರದಿಂದ ವ್ಯವಸ್ಥೆ ಹಾಳಾಗುತ್ತಿದೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲವೂ ನಾನೇ ಸರಿ ಎಂಬುದು ಸರಿಯಲ್ಲ. ಜಿಲ್ಲಾಡಳಿತದಿಂದ ತುಂಬಾ ಲೋಪದೋಷ ಇತ್ತು. ಪಾಲಿಕೆಯಿಂದ ಸಾಕಷ್ಟು ಕೋವಿಡ್ ಕೆಲಸ ಆಗಿದೆ. ಈ ನಡುವೆ ಜಿಲ್ಲಾಧಿಕಾರಿಗಳು ಹೆಚ್ಚು ಇಂಟ್ರೆಸ್ಟ್ ತೋರಿಸಬಹುದಿತ್ತು. ನಾವು ಎಲ್ಲ ಸಂಸ್ಥೆಗಳ‌ ಜೊತೆ ಮಾತಾಡಿ ಕೋವಿಡ್ ಕಂಟ್ರೋಲ್ ಗೆ ಸಿದ್ದತೆ ಮಾಡಿದ್ದೆವು. ಅಹಂಕಾರ ಇಷ್ಟು ಹೆಚ್ಚಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನೂ ಸಮನಾಗಿ ನೋಡಬೇಕು ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಅಹಂಕಾರ ಇರಲಿಲ್ಲ, ಕೆಲಸ ಮಾಡಬೇಕಿರುವುದೇ ನನ್ನ ಉದ್ದೇಶ. ಸಿಎಸ್‌ ಆರ್ ಫಂಡ್ ಬಗ್ಗೆ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ. ಎಲ್ಲರೂ ಕೊರೋನಾ ಕಂಟ್ರೋಲ್‌ ಗೆ ಕೈ ಜೋಡಿಸಿದ್ದಾರೆ ಎಂದು   ತಿಳಿಸಿದರು.

ಐಎಎಸ್ ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ. ರಾಜೀನಾಮೆ ನಿರ್ಧಾರ ನೋವಿನಿಂದ ತೆಗೆದುಕೊಂಡಿದ್ದು.  ವಾರ್ ರೂಮ್ ನಲ್ಲಿ ಲೋಪದೋಷಗಳಿತ್ತು. ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡಿದ್ದೇನೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿನಿಸಿದ್ದೇನೆ. ನಾನು ಯಾವುದೇ ರೀತಿ ತಪ್ಪು ಮಾಡಿದ್ದರೆ ಕ್ಷಮಿಸಿ  ಎಂದು ನುಡಿದರು.

Share
WhatsApp
Follow by Email